ಈ ಲೇಖನವು ಜೂನ್ ೮, ೨೦೧೦ ರಂದು, ಮಣಿಪಾಲ ಆವೃತ್ತಿಯ ಉದಯವಾಣಿಯಲ್ಲಿ ಪ್ರಕಟಗೊಂಡಿದೆ.
"ಬಜ್ಪೆ ವಿಮಾನ ಅಪಘಾತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿಯನ್ನು ಕೋರೋಣ", ಆಗಷ್ಟೇ ಸೆಮೆಸ್ಟರ್ ನ ಕನ್ನಡ ಪರೀಕ್ಷೆಯನ್ನು ಮುಗಿಸಿ ಬಂದು ಗೋಡೆಗೆ ಒರಗಿಕೊಂಡಿದ್ದ ನನಗೆ ಮೊಬೈಲ್ ಗೆ ಬಂದ ಮೆಸೇಜ್ ನೋಡಿ ದಿಗಿಲಾಯಿತು. ನೆಟ್ಟಗಾದೆ. ಯಾವಾಗ? ಹೇಗೆ? ಎಷ್ಟು ಹೊತ್ತಿಗೆ? ಹೀಗೆ ಹಲವಾರು ಪ್ರಶ್ನೆಗಳು ಕಾಡತೊಡಗಿದುವು. ಮೆಸೇಜ್ ಕಳಿಸಿದವರಲ್ಲಿ ವಿವರ ಕೇಳಿದೆ. ಮತ್ತೆ ತಿಳಿಯಿತು, ಬೆಳಗ್ಗೆ ೬ ಗಂಟೆಯ ಸುಮಾರಿಗೆ ನಮ್ಮ ಮನೆಯ ಮೇಲಿಂದಲೇ ಸಾಗಿದ್ದ ಆ ವಿಮಾನ ಹೋಗಿ ಇಳಿದದ್ದು ಮೃತ್ಯು ಕಣಿವೆಗೆ ಎಂದು. ಅಲ್ಲಿ ನಡೆದ ವಿದ್ಯಮಾನಗಳನ್ನು ಪತ್ರಿಕೆಗಳು, ಟಿ. ವಿ. ಮಾಧ್ಯಮಗಳು ಸವಿವರವಾಗಿ ನೀಡಿವೆ. ಮರುದಿನ ಪತ್ರಿಕೆಗಳನ್ನು ಓದಿದ ಮೇಲೆ ನನಗನಿಸಿದ್ದೇನೆಂದರೆ, ಈಗ ವಿಮಾನ ಬಿದ್ದ ಮೇಲೆ ಬಜ್ಪೆ ವಿಮಾನ ನಿಲ್ದಾಣದ ರನ್ ವೇ ಯ ಉದ್ದ ಕಡಮೆ ಆಗಿದೆ. ಅಥವಾ ರನ್ ವೇ ಯ ಉದ್ದ ಕಡಮೆ ಇದೆ ಎಂದು ಅರೋಪಿಸುವವರ ಸಂಖ್ಯೆ ಉದ್ದವಾಗಿದೆ. ಏರ್ ಇಂಡಿಯಾದ ಬಗ್ಗೆ ಮೊದಲಿನಿಂದಲೂ ದೂರುಗಳಿದ್ದುವು. ಆದರೆ ಈಗ ದೂರುವವರ ಕೂಗು ಜೋರಾಗಿದೆ. ವಿಮಾನದ ಅಪಘಾತಕ್ಕೆ ನಿಜವಾದ ಕಾರಣಗಳೇನು ಎಂಬುದು ಬ್ಲಾಕ್ ಬಾಕ್ಸ್ ನಿಂದ ಹೊರಗೆಳೆಯಬೇಕಷ್ಟೇ. ಆದರೆ ಒಂದು ಲಾಭವೆಂದರೆ ಬಜ್ಪೆ ವಿಮಾನ ನಿಲ್ದಾಣದ ರನ್ ವೇ ಇನ್ನೂ ಸ್ವಲ್ಪ ಉದ್ದವಾಗುವ ಸಂಭವವಿದೆ (ಎಷ್ಟು ವರ್ಷಗಳ ನಂತರ ಎಂದು ಗೊತ್ತಿಲ್ಲ!). ಒಳ್ಳೆಯದೇ. ಇನ್ನೊಮ್ಮೆ ಇಂತಹ ಅವಘಡ ಮರುಕಳಿಸದಿರಲಿ ಎಂಬುದೇ ಎಲ್ಲರ ಹಾರೈಕೆ.
ವಿಮಾನದ ಅಪಘಾತಕ್ಕೆ ಕಾರಣಗಳೇನು ಎಂಬುದು ಸ್ಪಷ್ಟವಾಗಿ ಇನ್ನೂ ತಿಳಿದಿಲ್ಲದಿದ್ದರೂ ಒಬ್ಬೊಬ್ಬರು ಒಂದೊಂದು ಊಹೆಯನ್ನು ಮಾಡುತ್ತಾರೆ. ಕೆಲವರು ಪೈಲೆಟ್ ಗಳಿಂದಾದ ಪ್ರಮಾದ ಎಂದರೆ ಇನ್ನು ಕೆಲವರು ಏರ್ ಇಂಡಿಯಾವನ್ನು, ಕಂಟ್ರ್ಓಲ್ ರೂಂನವರನ್ನು, ರನ್ ವೇಯನ್ನು ಹೀಗೆ ತಮ್ಮ ದೃಷ್ಟಿಯ ನೇರಕ್ಕೆ ಮಾತನಾಡುತ್ತಿದ್ದಾರೆ. ಇಂತಹ ಕಾರಣಗಳಲ್ಲಿ ಪ್ರಯಾಣಿಕರ ಬಗ್ಗೆ ಯಾರೂ ಸಂಶಯಿಸಲೇ ಇಲ್ಲ. ಕುವೈಟ್ ನ ಥೋಮಸ್ ಡೊಮಿನಿಕ್ ಎಂಬವರು ಈ ಬಗ್ಗೆಯೂ ನಮ್ಮ ದೃಷ್ಟಿಯನ್ನು ಹರಿಯಗೊಟ್ಟಿದ್ದಾರೆ. ಸಾಧಾರಣವಾಗಿ ವಿಮಾನ ಭೂಮಿಗಿಳಿಯುವ ಸಂದರ್ಭದಲ್ಲಿ ಮತ್ತು ಭೂಮಿಯಿಂದ ಮೇಲೇರುವ ಸಂದರ್ಭದಲ್ಲಿ ಮೊಬೈಲ್ ಗಳನ್ನು ಆಫ್ ಮಾಡುವುದಕ್ಕೆ ಹೇಳುತ್ತಾರೆ. ಕಾರಣವೇನೆಂದರೆ, ಮೊಬೈಲ್ ತರಂಗಗಳು ವಿಮಾನದ ಕಂಟ್ರೋಲ್ ರೂಮ್ ನೊಂದಿಗೆ ಸಂವಹಿಸುವ ತರಂಗಗಳಿಗೆ ತೊಂದರೆ ನೀಡುತ್ತವೆ. ಅಲ್ಲದೇ ಇವುಗಳಿಂದಾಗಿ ಪೈಲೆಟ್ ಗಳಿಗೆ ವಿಮಾನ ಎಷ್ಟು ಎತ್ತರದಲ್ಲಿದೆ, ಗಾಳಿಯ ಒತ್ತಡ ಎಷ್ಟಿದೆ ಎಂಬಂತಹ ಹಲವಾರು ಮಾಹಿತಿಗಳನ್ನೊದಗಿಸುವ ಯಂತ್ರಗಳು ತಪ್ಪು ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ. ಹಾಗಾದಾಗ, ಅಲ್ಲಿ ಬಂದ ತಪ್ಪು ವಿವರಗಳೇ ಸರಿ ಎಂದು ಊಹಿಸಿದ ಪೈಲೆಟ್ ನ ಲೆಕ್ಕಾಚಾರ ತಲೆಕೆಳಗಾಗುತ್ತದೆ. ವಿಮಾನ ಉರುಳುತ್ತದೆ. ತಮ್ಮ ತಪ್ಪು ಇಲ್ಲದೆಯೂ ಅಜಾಗ್ರತೆ, ನಿದ್ದೆಗಣ್ಣು ಹೀಗೆ ಹಲವಾರು ಆರೋಪಗಳನ್ನು ಪೈಲೆಟ್ ಗಳು ಕೇಳಿಸಿಕೊಳ್ಳಬೇಕಾಗುತ್ತದೆ. ಮೊನ್ನೆ ನಡೆದ ದುರಂತದಲ್ಲಿ ವಿಮಾನದ ನಿಯಂತ್ರಣ ತಪ್ಪಿದ ಮೇಲೂ ಪೈಲೆಟ್ ಗಳು ಹಾರಿ ತಮ್ಮ ಜೀವವನ್ನು ಉಳಿಸಿಕೊಳ್ಳುವ ಮನಸ್ಸನ್ನು ತೋರಿಸಲಿಲ್ಲ. ಬದಲಾಗಿ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡುವುದಕ್ಕೆ ಪ್ರಯತ್ನಿಸುವ ಮೂಲಕ ಎಲ್ಲರನ್ನೂ ಉಳಿಸುವುದಕ್ಕೆ ಹವಣಿಸಿದರು. ಅದು ಕೈಗೂಡಲಿಲ್ಲ. ಹಾಗಾಗಿ ವಿಧಿಯ ಆಟ ಬೇರೆಯೇ ಇತ್ತು ಎಂದು ಹೇಳಬೇಕಷ್ಟೆ.
ರನ್ ವೇಯನ್ನು ಉದ್ದ ಮಾಡುವುದಕ್ಕೆ ರಾಜಕಾರಣಿಗಳು, ಇತರ ಮುಖಂಡರು, ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ಲ ಪಟೇಲ್ ರವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಇದು ವಾಯುಯಾನದ ವಿಷಯಕ್ಕಾಯಿತು. ರಸ್ತೆ ಸಂಚಾರದ ಕಥೆ ಏನು? ರಸ್ತೆ ಅಗಲೀಕರಣ, ಉನ್ನತೀಕರಣದ ಕುರಿತು ಯಾಕಿಷ್ಟು ಔದಾಸೀನ್ಯ ವಹಿಸುತ್ತಾರೋ ತಿಳಿಯೆ. ರಸ್ತೆಗಳು ಸರಿ ಇಲ್ಲದ ಕಾರಣದಿಂದಲೇ ದಿನನಿತ್ಯ ಇಷ್ಟೊಂದು ಅಪಘಾತಗಳು ಸಂಭವಿಸುತ್ತಿವೆ. ಎಷ್ಟೊಂದು ಜನರು ಜೀವ ಕಳೆದುಕೊಂಡಿದ್ದಾರೆ! ಆದರೂ ಇದು ಮಂತ್ರಿಗಳ, ಜನಪ್ರತಿನಿಧಿಗಳ ಗಮನಕ್ಕೆ ಅಥವಾ ಎಷ್ಟೋ ಬಾರಿ ಜನಸಾಮಾನ್ಯರ ಗಮನಕ್ಕೂ ಬಾರದಿರುವುದಕ್ಕೆ ಕಾರಣವಿಷ್ಟೇ. ನಮಗೆ ರಸ್ತೆ ಅಪಘಾತಗಳು ಮಾಮೂಲಾಗಿಬಿಟ್ಟಿವೆ. ದಿನ ನಿತ್ಯವೂ ಒಂದು ಬಸ್ಸೋ ಅಥವಾ ಲಾರಿಯೋ ಅಥವಾ ಇನ್ಯಾವುದಾದರೂ ವಾಹನವೋ ಗುದ್ದಿದ, ನಜ್ಜುಗುಜ್ಜಾದ ಚಿತ್ರವು ದಿನಪತ್ರಿಕೆಗಳಲ್ಲಿ ಸರ್ವೇಸಮಾನ್ಯ. ಇಂತಹ ಚಿತ್ರಣಗಳನ್ನು ನೋಡಿದಾಗ ಜನರ ಮನಸ್ಸಿನಲ್ಲಿ ಹೆದರಿಕೆ ಬಿಡಿ, ಎಷ್ಟೋ ಬಾರಿ ಜೀವ ಕಳೆದುಕೊಂಡವರ ಬಗ್ಗೆ ಕಡೇ ಪಕ್ಷ ಕರುಣೆಯ ಮಾತುಗಳೂ ಕೇಳಿ ಬರುವುದಿಲ್ಲ. ಆದರೂ ನಮಗರಿವಿಲ್ಲದೆಯೇ ಎಷ್ಟೋ ಕುಟುಂಬದ ಕುಡಿಗಳು, ಬದುಕಿನ ಆಧಾರ ಸ್ತಂಭಗಳು ಕಳೆದು ಹೋಗುತ್ತಿವೆ.
ಪ್ರಪಂಚದಲ್ಲಿಯೇ ರಸ್ತೆ ಅಪಘಾತಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ. ಭಾರತದಲ್ಲಿ ಆಗುವ ರಸ್ತೆ ಅಪಘಾತಗಳ ಸಂಖ್ಯೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆಗುವ ರಸ್ತೆ ಅಪಘಾತಗಳ ಮೂರು ಪಟ್ಟು. ಭಾರತದ ಪ್ರತಿ ೧೦೦೦ ವಾಹನಗಳಲ್ಲಿ ೩೫ ವಾಹನಗಳು ಅಪಘಾತಗೊಂಡರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕೇವಲ ೪ರಿಂದ ೧೦. ಹಿಂದುಸ್ತಾನ್ ಟೈಮ್ಸ್ ಪತ್ರಿಕೆಯ ವರದಿಯ ಪ್ರಕಾರ ವರ್ಷಕ್ಕೆ ೧.೦೫ ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಮಡಿಯುತ್ತಿದ್ದಾರೆ. ಅಂತೆಯೇ ವಿಮಾನ ನಿಲ್ದಾಣಗಳಲ್ಲಿ ಆಗುವ ವಿಮಾನಗಳ ಅಪಘಾತಗಳ ಸಂಖ್ಯೆ ಮತ್ತು ಅದರಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ಬಹಳ ಕಡಮೆ. ೧೯೮೨ ರಲ್ಲಿ ಮುಂಬೈಯಲ್ಲಿ ೧೭ ಜನ, ೧೯೮೮ರಲ್ಲಿ ಅಹಮದಾಬಾದ್ ನಲ್ಲಿ ೧೨೪ ಮಂದಿ, ೯೦ ರಲ್ಲಿ ೯೨ ಜನ, ೯೧ರಲ್ಲಿ ಇಂಫಾಲ್ ನಲ್ಲಿ ೬೯ ಪ್ರಯಾಣಿಕರು, ೯೩ರಲ್ಲಿ ೫೫ ಮಂದಿ ಔರಂಗಾಬಾದ್ ನಲ್ಲಿ, ೨೦೦೦ದಲ್ಲಿ ೬೦ ಜನ ಪಾಟ್ನಾದಲ್ಲಿ ಮತ್ತು ಇತ್ತೀಚೆಗೆ ೨೦೧೦ರಲ್ಲಿ ೧೫೮ ಮಂದಿ ಮಡಿದಿದ್ದಾರೆ. ಈ ವಿವರಗಳನ್ನು ನೋಡುವಾಗ, ರಸ್ತೆ ಅಪಘಾತಗಳ ಬಗ್ಗೆ ನಾವು ಎಚ್ಚರಿಕೆ ವಹಿಸಬೇಡವೇ? ಇಂತಹ ಪರಿಸ್ಥಿತಿಯನ್ನು ಆದಷ್ಟು ಬೇಗ ಸರಿಮಾಡಲು ಜನಸೇವಕರು ಮತ್ತು ರಸ್ತೆ ನಿರ್ಮಾಣ ಸಂಬಂಧಿ ಎಂಜಿನಿಯರುಗಳು ಮನಸ್ಸು ಮಾಡುತ್ತಾರೆಯೇ? ರಸ್ತೆಗಳು ಚೆನ್ನಾಗಿ ಇರುವಂತೆ ಎಚ್ಚರ ವಹಿಸುತ್ತಾರೆಯೇ? ರಸ್ತೆ ಅಪಘಾತಗಳನ್ನು ಕಡಮೆ ಮಾಡಲು ಸೂಕ್ತ ಸೂಚನಾ ಫಲಕಗಳನ್ನು ನೆಡುತ್ತಾರೆಯೇ? ಡಾಮರು ರಸ್ತೆಗಳ ಬದಿಗಳನ್ನು ಮಣ್ಣು ತುಂಬಿಸಿ ಬದಿಗಳನ್ನು ಸರಿ ಮಾಡುವ ಬಗ್ಗೆ ಗಮನ ವಹಿಸುತ್ತಾರೆಯೇ? ಅಗತ್ಯವಿದ್ದಲ್ಲಿ ರೋಡ್ ಹಂಪ್ ಗಳನ್ನು ಮಾಡುವ ಕುರಿತು ಆಸಕ್ತರಾಗಿದ್ದಾರೆಯೇ?
ನಮ್ಮ ರಸ್ತೆಗಳ ಕುರಿತು ಒಬ್ಬ ೬ ವರ್ಷದ ಮುಗ್ಧ ಪೋರ ಮೊನ್ನೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೀಡಿದ ಹೇಳಿಕೆ ಮಾರ್ಮಿಕವಾಗಿತ್ತು. ಮಂಗಳೂರು ನಗರದಿಂದ ಬಿ.ಸಿ. ರೋಡ್ ಕಡೆಗೆ ಬಸ್ ಹೊರಟಾಗ ಆರಂಭದಲ್ಲಿ ರಸ್ತೆ ಚೆನ್ನಾಗಿಯೇ ಇತ್ತು. ಕಿಟಕಿಯ ಮೂಲಕ ಬೀಸುತ್ತಿದ್ದ ಗಾಳಿಯನ್ನು ಆಸ್ವಾದಿಸುತ್ತಿದ್ದ ಪುಟ್ಟ "ಅಚ್ಛಾ ಲಗ್ ರಹಾ ಹೇ ನ ಪಪ್ಪಾ?" (ಒಳ್ಳೆದಾಗ್ತಾ ಇದೆ ಅಲ್ವ ಅಪ್ಪಾ?) ಅಂತ ತನ್ನ ತಂದೆಯಲ್ಲಿ ಸಂತೋಷವನ್ನು ಹಂಚಿಕೊಂಡ. ಅಪ್ಪ ನಗುನಗುತ್ತಾ ತಲೆ ಅಲ್ಲಾಡಿಸಿದ. ಮುಂದೆ ಸಾಗುತ್ತಿದ್ದಂತೆ, ರಸ್ತೆಯ ಪರಿಸ್ಥಿತಿ ಸ್ವಲ್ಪ ಹದಗೆಟ್ಟಿತು. ಆಗ "ರಾಸ್ತಾ ಖರಾಬ್ ಹೇ ನ ಪಪ್ಪಾ?" (ರಸ್ತೆ ಕೆಟ್ಟದಾಗಿದೆಯಲ್ಲ ಅಪ್ಪಾ?) ಅಂತ ಸ್ವಲ್ಪ ಅಸಹನೆಯನ್ನು ತೋರ್ಪಡಿಸಿದ. ಅಪ್ಪ ಹೌದು ಎಂಬಂತೆ ತಲೆ ಅಲ್ಲಾಡಿಸಿದ. ಮುಂದೆ ಹೋಗುವಾಗ ರಸ್ತೆ ಪರಿಸ್ಥಿತಿ ತುಂಬಾ ಕೆಟ್ಟದಾಗಿ ಹೋಗಿತ್ತು. ಬಸ್ಸು ಮೇಲೆ ಕೆಳಗೆ ಹಾರಲಾರಂಭಿಸಿತ್ತು. ಹೊಂಡಗಳನ್ನು ಇಳಿದು ಏರತೊಡಗಿತು. ಕಂಗಾಲಾದ ಹುಡುಗ "ಅಬ್ ರಾಸ್ತೇ ಪರ್ ಜಾತಾ ಹೇ ಕ್ಯಾ?!" (ಈಗ ರಸ್ತೆಯ ಮೇಲೆ ಹೋಗುತ್ತಿದೆಯಾ?!) ಅಂತ ತಂದೆಯನ್ನು ಪ್ರಶ್ನಿಸಿದ. ತಂದೆ ಪೆಚ್ಚುಬಿದ್ದ!
Thursday, June 10, 2010
Tuesday, May 25, 2010
ಮರುಮೌಲ್ಯಮಾಪನ - ನಿಜವಾಗಿ ಯಾರದ್ದು?
ಈ ಲೇಖನವು ಮೇ 9 ರ ಉದಯವಾಣಿಯಲ್ಲಿ ಪ್ರಕಟಗೊಂಡಿದೆ.
"ಹೋಯ್! ನಿಮ್ಮ ಮಗನಿಗೆ ಎಷ್ಟು ಮಾರ್ಕ್ ಬಂತು? ನನ್ನ ಮಗಳಿಗೆ ಸ್ವಲ್ಪ ಕಮ್ಮಿ ಬಂದಿದೆ. ಹಾಗೆ ರಿವಾಲ್ಯ್ವೇಷನ್ ಗೆ ಹಾಕ್ತಾ ಇದ್ದೇನೆ", "ನನ್ನ ಮಗನಿಗೂ ಎಣಿಸಿದಷ್ಟು ಮಾರ್ಕ್ ಬರ್ಲಿಲ್ಲ. ಹಾಗೆ ಡಿ.ಡಿ. ತೆಗೆದುಕೊಂಡು ಹೋಗೋಣ ಅಂತ ಬಂದೆ" ಮೊನ್ನೆ ಬ್ಯಾಂಕಿನಲ್ಲಿದ್ದಾಗ ಈ ಸಂಭಾಷಣೆ ಕಿವಿಗೆ ಬಿತ್ತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಫಲಿತಾಂಶಗಳು ಬಂದ ನಂತರದ ವಿದ್ಯಮಾನ ಇದು. ನೋಡಿದರೆ ಇಂತಹ ಹೆತ್ತವರ ದಂಡೇ ಅಲ್ಲಿ ಸೇರಿತ್ತು. ಕಾಲೇಜಿನಲ್ಲಿ ಅಪ್ಲಿಕೇಶನಿಗೆ ಕ್ಯೂ ನಿಲ್ಲುವ ಬದಲು ಬ್ಯಾಂಕಿನಲ್ಲಿ ಡಿ.ಡಿ. ತೆಗೆದುಕೊಳ್ಳಲು ನಿಂತಿದ್ದರು. ಸೂಕ್ಷ್ಮವಾಗಿ ಅವರ ಮಾತುಕತೆಗಳಿಗೆ ಕಿವಿಗೊಟ್ಟಾಗ ನಾನು ಕಂಡದ್ದು, ತಾವು ನಿರೀಕ್ಷಿಸಿದ ಅಂಕಗಳು ಸಿಗದ ದುಗುಡ ತುಂಬಿದ ಮಕ್ಕಳ ಮುಖಗಳು. ಕೆಲವರಲ್ಲಿ ರೋಷ ಇತ್ತು. ಇನ್ನು ಕೆಲವರಲ್ಲಿ ವ್ಯವಸ್ಥೆಯ ಬಗೆಗೆ ಅಸಹನೆ ಇತ್ತು. ಮತ್ತೆ ಕೆಲವರ ಕಣ್ಣಲ್ಲಿ ಅಳು ತುಂಬಿತ್ತು.
ಇವರೆಲ್ಲಾ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೇನೋ ಹೌದು. ಕೆಲವು ದಿನಗಳಲ್ಲಿ ಫಲಿತಾಂಶವೂ ಬರುತ್ತದೆ. ಅನೇಕರಿಗೆ ಹೆಚ್ಚು ಅಂಕಗಳೂ ಸಿಗಬಹುದು. ಆದರೆ ನನಗೆ ಮೂಡಿದ ಪ್ರಶ್ನೆ ಏನೆಂದರೆ ಇದು ನಿಜವಾಗಿ ಯಾರ ಮೌಲ್ಯಮಾಪನ? ವಿದ್ಯಾರ್ಥಿಗಳದ್ದೇ? ಮೊದಲ ಮೌಲ್ಯಮಾಪಕರದ್ದೇ? ಅಥವಾ ಪರೀಕ್ಷಾ ವ್ಯವಸ್ಥೆಯದ್ದೇ?
ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತಾವು ಅಂದುಕೊಂಡಷ್ಟೇ ಅಂಕಗಳು ಬರುವುದು ಕಡಮೆ. ಹೆಚ್ಚಿನವರಿಗೆ ಎಣಿಸಿದ್ದಕ್ಕಿಂತ ಕಡಮೆಯೇ ಬಂದಿರುತ್ತದೆ. ಇನ್ನು ಕೆಲವರಿಗೆ ತಮ್ಮ ಅಪೇಕ್ಷೆಗೂ ಮೀರಿ ಅಂಕಗಳು ಸಿಕ್ಕಿರುತ್ತವೆ. ಇಂಥವರು ಮರು ಮೌಲ್ಯಮಾಪನಕ್ಕೆ ಹಾಕುತ್ತಾರೆಯೇ? ಖಂಡಿತಾ ಇಲ್ಲ. ಯಾರು ತಾನೇ ಅಂಕಗಳನ್ನು ಕಡಮೆಗೊಳಿಸಿಕೊಳ್ಳುವುದಕ್ಕೆ ಬಯಸುತ್ತಾರೆ? ಆದರೆ ಆನೇಕ ವಿದ್ಯಾರ್ಥಿಗಳು ತಮಗೆ ನಿಜವಾಗಿ ಬರಬೇಕಾಗಿದ್ದ ಅಂಕಗಳು ಬರದಿದ್ದಾಗ ಸಹಜವಾಗಿ ಮೌಲ್ಯಮಾಪನದ ಕುರಿತು ಸಂಶಯಿಸುತ್ತಾರೆ ಹಾಗೂ ಮರುಮೌಲ್ಯಮಾಪನವನ್ನು ಬಯಸುತ್ತಾರೆ. ಇದಕ್ಕೆ ಬೇಕಾದ ವ್ಯವಸ್ಥೆಯೂ ನಮ್ಮ ಶಿಕ್ಷಣ ಇಲಾಖೆಯಲ್ಲಿದೆ. "ನೂರು ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು" ಎನ್ನುವುದೇ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೂಲ ತತ್ವವಲ್ಲವೇ?
ಇತ್ತೀಚಿನ ದಿನಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದು ಯಾಕೆ ಹೀಗೆ? ಎಷ್ಟೋ ಬಾರಿ ಮರು ಮೌಲ್ಯಮಾಪನ ಮಾಡಿದಾಗ ಅನೇಕ ವಿದ್ಯಾರ್ಥಿಗಳಿಗೆ ತುಂಬಾ ಅಂಕಗಳೂ ಸಿಕ್ಕಿ, ಕೆಲವೊಮ್ಮೆ ಅತ್ಯುನ್ನತ ಶ್ರೇಣಿಗೇರಿದ ಉದಾಹರಣೆಗಳು ಎಷ್ಟೋ ಇವೆ. ಮೊದಲ ಮೌಲ್ಯಮಾಪನದಲ್ಲಿ ತರಗತಿಯಲ್ಲಿ ಹಿಂದಿದ್ದವರು ಶಾಲೆಯಲ್ಲಿ ಮೊದಲಿಗರಾಗುತ್ತಾರೆ. ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಮೊದಲಿಗರಾಗಿದ್ದವರನ್ನು ಬದಿಗೆ ಸರಿಸಿ ಮೊದಲ ಸ್ಥಾನ ಆಕ್ರಮಿಸುತ್ತಾರೆ. ರಾಂಕ್ ಘೋಷಣೆಯಲ್ಲಿ ಏರುಪೇರು ಮಾಡುತ್ತಾರೆ. ಹಾಗಿದ್ದರೆ ಇದರ ಅರ್ಥವೇನು? ಮೊದಲು ತಿದ್ದಿದ ಶಿಕ್ಷಕ ಸರಿಯಾಗಿ ತಿದ್ದಲಿಲ್ಲವೆಂದೇ? ಅಥವಾ ಮರುಮೌಲ್ಯಮಾಪಕ ಉದಾರಿ ಎಂದೇ? ಎರಡೂ ಸಾಧ್ಯತೆಗಳಿವೆ. ತೊಂದರೆ ಏನೆಂದರೆ, ಉತ್ತರ ಪತ್ರಿಕೆಯನ್ನು ಮೊದಲು ತಿದ್ದಿದ ಶಿಕ್ಷಕನಿಗೆ ತಾನು ಯಾಕೆ ಕಡಮೆ ಅಂಕ ಕೊಟ್ಟೆ ಎಂಬುದರ ಕುರಿತು ವಿವರಣೆ ನೀಡಲು ಅವಕಾಶವಿರುವುದಿಲ್ಲ. ಪ್ರತಿಯೊಬ್ಬನ ಯೋಚನಾ ಕ್ರಮಗಳು ಒಂದೊಂದು ರೀತಿ. ಹಾಗಾಗಿ ಒಬ್ಬ ಶಿಕ್ಷಕನಿಗೆ ಇಷ್ಟವಾಗದ ಉತ್ತರದ ವಿಧಾನ ಇನ್ನೊಬ್ಬನಿಗೆ ಇಷ್ಟವಾಗಲೂಬಹುದು. ಹಾಗಾದಾಗ, ಪ್ರತಿಯೊಂದು ಉತ್ತರಕ್ಕೂ ಎರಡನೇ ಶಿಕ್ಷಕ ಅರ್ಧರ್ಧ ಅಂಕಗಳನ್ನು ಹೆಚ್ಚು ಕೊಟ್ಟರೂ ಒಟ್ಟು ಅಂಕಗಳು ಬಹಳ ಹೆಚ್ಚಾಗುತ್ತವೆ.
ವಾಸ್ತವಿಕವಾಗಿ ಮೌಲ್ಯಮಾಪನ ಕ್ರಮದಲ್ಲಿ, ಮರುಮೌಲ್ಯಮಾಪನ ನಡೆದೇ ಇರುತ್ತದೆ. ಯಾಕೆಂದರೆ ಒಬ್ಬ ಶಿಕ್ಷಕ ತಿದ್ದಿದ್ದರಲ್ಲಿ ತಪ್ಪುಗಳಿವೆಯೇ, ಅಂಕಗಳನ್ನು ಕೂಡುವಲ್ಲಿ ಮಾನವ ಸಹಜವಾದ ತಪ್ಪುಗಳಾಗಿವೆಯೇ ಎಂದು ಪುನಃ ಪರೀಕ್ಷಿಸುವುದಕ್ಕಾಗಿಯೇ ಅನುಭವಿ ಶಿಕ್ಷಕರನ್ನು ನೇಮಿಸಿರುತ್ತಾರೆ. ವ್ಯವಸ್ಥೆ ಹೀಗಿದ್ದೂ ಮರುಮೌಲ್ಯಮಾಪನದ ಪಿಡುಗು ಈ ಮಟ್ಟದಲ್ಲಿ ಏರುವುದಕ್ಕೆ ಏನು ಕಾರಣ? ಸಾವಿರಾರು ವಿದ್ಯಾರ್ಥಿಗಳು ಆತಂಕಭರಿತರಾಗಿ ತಿಂಗಳುಗಟ್ಟಲೆ ಸಮರ್ಪಕ ಫಲಿತಾಂಶಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಯಾಕೆ? ಮರುಮೌಲ್ಯಮಾಪನದ ವ್ಯವಸ್ಥೆ ಇರುವುದೇ ಮೌಲ್ಯಮಾಪನದ ನ್ಯೂನತೆಗಳಿಗೆ ಕಾರಣವೇ? ಇವು ಗಮನಿಸಲೇಬೇಕಾದ ಪ್ರಶ್ನೆಗಳು.
ಹೋಗಲಿ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರಾದರೂ ಯಾರು? ಹಣವಿದ್ದವರು ಮಾತ್ರ. ಯಾಕೆಂದರೆ ಬಡ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ ೭೦೦ ರೂಪಾಯಿಗಳಷ್ಟನ್ನು ಕಟ್ಟಿ ಮರುಮೌಲ್ಯಮಾಪನ ಮಾಡಿಸುವುದಕ್ಕೆ ಸಾಧ್ಯವೇ? ಹಾಗಾಗಿ ಅಂತಹ ವಿದ್ಯಾರ್ಥಿಗಳು ಸಿಕ್ಕಿದ ಅಂಕಗಳಲ್ಲೇ ಸಂತೋಷಪಡಬೇಕಾಗುತ್ತದೆ. ಹೀಗಿರುವ ವ್ಯವಸ್ಥೆಯಲ್ಲಿ ಸರಕಾರ ಬಡವರಿಗೆ ಹೇಗೆ ನ್ಯಾಯ ಸಲ್ಲಿಸಿದಂತಾಗುತ್ತದೆ? ಮೊದಲ ಮೌಲ್ಯಮಾಪನವನ್ನೇ ಅಚ್ಚುಕಟ್ಟಾಗಿ ಮಾಡುವಂತೆ ವ್ಯವಸ್ಥೆ ಮಾಡಿದರೆ, ಮರುಮೌಲ್ಯಮಾಪನದ ಅರ್ಜಿಗಳ ಸಂಖ್ಯೆಯನ್ನು ಕಡಮೆಗೊಳಿಸುವುದಕ್ಕೆ ಸಾಧ್ಯವಿಲ್ಲವೇ? ಮರುಮೌಲ್ಯಮಾಪನದ ಅರ್ಜಿಗಳ ಸಂಖ್ಯೆ ಹೆಚ್ಚಿದಷ್ಟೂ ಅದು ಮೌಲ್ಯಮಾಪನದ ಗುಣಮಟ್ಟ ಕಡಮೆ ಆಗುತ್ತಿರುವುದಕ್ಕೆ ಪುರಾವೆ ಆಗುವುದಿಲ್ಲವೇ?
ಅಕ್ಷರ ಸಿ. ದಾಮ್ಲೆ.
"ಹೋಯ್! ನಿಮ್ಮ ಮಗನಿಗೆ ಎಷ್ಟು ಮಾರ್ಕ್ ಬಂತು? ನನ್ನ ಮಗಳಿಗೆ ಸ್ವಲ್ಪ ಕಮ್ಮಿ ಬಂದಿದೆ. ಹಾಗೆ ರಿವಾಲ್ಯ್ವೇಷನ್ ಗೆ ಹಾಕ್ತಾ ಇದ್ದೇನೆ", "ನನ್ನ ಮಗನಿಗೂ ಎಣಿಸಿದಷ್ಟು ಮಾರ್ಕ್ ಬರ್ಲಿಲ್ಲ. ಹಾಗೆ ಡಿ.ಡಿ. ತೆಗೆದುಕೊಂಡು ಹೋಗೋಣ ಅಂತ ಬಂದೆ" ಮೊನ್ನೆ ಬ್ಯಾಂಕಿನಲ್ಲಿದ್ದಾಗ ಈ ಸಂಭಾಷಣೆ ಕಿವಿಗೆ ಬಿತ್ತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಫಲಿತಾಂಶಗಳು ಬಂದ ನಂತರದ ವಿದ್ಯಮಾನ ಇದು. ನೋಡಿದರೆ ಇಂತಹ ಹೆತ್ತವರ ದಂಡೇ ಅಲ್ಲಿ ಸೇರಿತ್ತು. ಕಾಲೇಜಿನಲ್ಲಿ ಅಪ್ಲಿಕೇಶನಿಗೆ ಕ್ಯೂ ನಿಲ್ಲುವ ಬದಲು ಬ್ಯಾಂಕಿನಲ್ಲಿ ಡಿ.ಡಿ. ತೆಗೆದುಕೊಳ್ಳಲು ನಿಂತಿದ್ದರು. ಸೂಕ್ಷ್ಮವಾಗಿ ಅವರ ಮಾತುಕತೆಗಳಿಗೆ ಕಿವಿಗೊಟ್ಟಾಗ ನಾನು ಕಂಡದ್ದು, ತಾವು ನಿರೀಕ್ಷಿಸಿದ ಅಂಕಗಳು ಸಿಗದ ದುಗುಡ ತುಂಬಿದ ಮಕ್ಕಳ ಮುಖಗಳು. ಕೆಲವರಲ್ಲಿ ರೋಷ ಇತ್ತು. ಇನ್ನು ಕೆಲವರಲ್ಲಿ ವ್ಯವಸ್ಥೆಯ ಬಗೆಗೆ ಅಸಹನೆ ಇತ್ತು. ಮತ್ತೆ ಕೆಲವರ ಕಣ್ಣಲ್ಲಿ ಅಳು ತುಂಬಿತ್ತು.
ಇವರೆಲ್ಲಾ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೇನೋ ಹೌದು. ಕೆಲವು ದಿನಗಳಲ್ಲಿ ಫಲಿತಾಂಶವೂ ಬರುತ್ತದೆ. ಅನೇಕರಿಗೆ ಹೆಚ್ಚು ಅಂಕಗಳೂ ಸಿಗಬಹುದು. ಆದರೆ ನನಗೆ ಮೂಡಿದ ಪ್ರಶ್ನೆ ಏನೆಂದರೆ ಇದು ನಿಜವಾಗಿ ಯಾರ ಮೌಲ್ಯಮಾಪನ? ವಿದ್ಯಾರ್ಥಿಗಳದ್ದೇ? ಮೊದಲ ಮೌಲ್ಯಮಾಪಕರದ್ದೇ? ಅಥವಾ ಪರೀಕ್ಷಾ ವ್ಯವಸ್ಥೆಯದ್ದೇ?
ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತಾವು ಅಂದುಕೊಂಡಷ್ಟೇ ಅಂಕಗಳು ಬರುವುದು ಕಡಮೆ. ಹೆಚ್ಚಿನವರಿಗೆ ಎಣಿಸಿದ್ದಕ್ಕಿಂತ ಕಡಮೆಯೇ ಬಂದಿರುತ್ತದೆ. ಇನ್ನು ಕೆಲವರಿಗೆ ತಮ್ಮ ಅಪೇಕ್ಷೆಗೂ ಮೀರಿ ಅಂಕಗಳು ಸಿಕ್ಕಿರುತ್ತವೆ. ಇಂಥವರು ಮರು ಮೌಲ್ಯಮಾಪನಕ್ಕೆ ಹಾಕುತ್ತಾರೆಯೇ? ಖಂಡಿತಾ ಇಲ್ಲ. ಯಾರು ತಾನೇ ಅಂಕಗಳನ್ನು ಕಡಮೆಗೊಳಿಸಿಕೊಳ್ಳುವುದಕ್ಕೆ ಬಯಸುತ್ತಾರೆ? ಆದರೆ ಆನೇಕ ವಿದ್ಯಾರ್ಥಿಗಳು ತಮಗೆ ನಿಜವಾಗಿ ಬರಬೇಕಾಗಿದ್ದ ಅಂಕಗಳು ಬರದಿದ್ದಾಗ ಸಹಜವಾಗಿ ಮೌಲ್ಯಮಾಪನದ ಕುರಿತು ಸಂಶಯಿಸುತ್ತಾರೆ ಹಾಗೂ ಮರುಮೌಲ್ಯಮಾಪನವನ್ನು ಬಯಸುತ್ತಾರೆ. ಇದಕ್ಕೆ ಬೇಕಾದ ವ್ಯವಸ್ಥೆಯೂ ನಮ್ಮ ಶಿಕ್ಷಣ ಇಲಾಖೆಯಲ್ಲಿದೆ. "ನೂರು ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು" ಎನ್ನುವುದೇ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೂಲ ತತ್ವವಲ್ಲವೇ?
ಇತ್ತೀಚಿನ ದಿನಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದು ಯಾಕೆ ಹೀಗೆ? ಎಷ್ಟೋ ಬಾರಿ ಮರು ಮೌಲ್ಯಮಾಪನ ಮಾಡಿದಾಗ ಅನೇಕ ವಿದ್ಯಾರ್ಥಿಗಳಿಗೆ ತುಂಬಾ ಅಂಕಗಳೂ ಸಿಕ್ಕಿ, ಕೆಲವೊಮ್ಮೆ ಅತ್ಯುನ್ನತ ಶ್ರೇಣಿಗೇರಿದ ಉದಾಹರಣೆಗಳು ಎಷ್ಟೋ ಇವೆ. ಮೊದಲ ಮೌಲ್ಯಮಾಪನದಲ್ಲಿ ತರಗತಿಯಲ್ಲಿ ಹಿಂದಿದ್ದವರು ಶಾಲೆಯಲ್ಲಿ ಮೊದಲಿಗರಾಗುತ್ತಾರೆ. ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಮೊದಲಿಗರಾಗಿದ್ದವರನ್ನು ಬದಿಗೆ ಸರಿಸಿ ಮೊದಲ ಸ್ಥಾನ ಆಕ್ರಮಿಸುತ್ತಾರೆ. ರಾಂಕ್ ಘೋಷಣೆಯಲ್ಲಿ ಏರುಪೇರು ಮಾಡುತ್ತಾರೆ. ಹಾಗಿದ್ದರೆ ಇದರ ಅರ್ಥವೇನು? ಮೊದಲು ತಿದ್ದಿದ ಶಿಕ್ಷಕ ಸರಿಯಾಗಿ ತಿದ್ದಲಿಲ್ಲವೆಂದೇ? ಅಥವಾ ಮರುಮೌಲ್ಯಮಾಪಕ ಉದಾರಿ ಎಂದೇ? ಎರಡೂ ಸಾಧ್ಯತೆಗಳಿವೆ. ತೊಂದರೆ ಏನೆಂದರೆ, ಉತ್ತರ ಪತ್ರಿಕೆಯನ್ನು ಮೊದಲು ತಿದ್ದಿದ ಶಿಕ್ಷಕನಿಗೆ ತಾನು ಯಾಕೆ ಕಡಮೆ ಅಂಕ ಕೊಟ್ಟೆ ಎಂಬುದರ ಕುರಿತು ವಿವರಣೆ ನೀಡಲು ಅವಕಾಶವಿರುವುದಿಲ್ಲ. ಪ್ರತಿಯೊಬ್ಬನ ಯೋಚನಾ ಕ್ರಮಗಳು ಒಂದೊಂದು ರೀತಿ. ಹಾಗಾಗಿ ಒಬ್ಬ ಶಿಕ್ಷಕನಿಗೆ ಇಷ್ಟವಾಗದ ಉತ್ತರದ ವಿಧಾನ ಇನ್ನೊಬ್ಬನಿಗೆ ಇಷ್ಟವಾಗಲೂಬಹುದು. ಹಾಗಾದಾಗ, ಪ್ರತಿಯೊಂದು ಉತ್ತರಕ್ಕೂ ಎರಡನೇ ಶಿಕ್ಷಕ ಅರ್ಧರ್ಧ ಅಂಕಗಳನ್ನು ಹೆಚ್ಚು ಕೊಟ್ಟರೂ ಒಟ್ಟು ಅಂಕಗಳು ಬಹಳ ಹೆಚ್ಚಾಗುತ್ತವೆ.
ವಾಸ್ತವಿಕವಾಗಿ ಮೌಲ್ಯಮಾಪನ ಕ್ರಮದಲ್ಲಿ, ಮರುಮೌಲ್ಯಮಾಪನ ನಡೆದೇ ಇರುತ್ತದೆ. ಯಾಕೆಂದರೆ ಒಬ್ಬ ಶಿಕ್ಷಕ ತಿದ್ದಿದ್ದರಲ್ಲಿ ತಪ್ಪುಗಳಿವೆಯೇ, ಅಂಕಗಳನ್ನು ಕೂಡುವಲ್ಲಿ ಮಾನವ ಸಹಜವಾದ ತಪ್ಪುಗಳಾಗಿವೆಯೇ ಎಂದು ಪುನಃ ಪರೀಕ್ಷಿಸುವುದಕ್ಕಾಗಿಯೇ ಅನುಭವಿ ಶಿಕ್ಷಕರನ್ನು ನೇಮಿಸಿರುತ್ತಾರೆ. ವ್ಯವಸ್ಥೆ ಹೀಗಿದ್ದೂ ಮರುಮೌಲ್ಯಮಾಪನದ ಪಿಡುಗು ಈ ಮಟ್ಟದಲ್ಲಿ ಏರುವುದಕ್ಕೆ ಏನು ಕಾರಣ? ಸಾವಿರಾರು ವಿದ್ಯಾರ್ಥಿಗಳು ಆತಂಕಭರಿತರಾಗಿ ತಿಂಗಳುಗಟ್ಟಲೆ ಸಮರ್ಪಕ ಫಲಿತಾಂಶಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಯಾಕೆ? ಮರುಮೌಲ್ಯಮಾಪನದ ವ್ಯವಸ್ಥೆ ಇರುವುದೇ ಮೌಲ್ಯಮಾಪನದ ನ್ಯೂನತೆಗಳಿಗೆ ಕಾರಣವೇ? ಇವು ಗಮನಿಸಲೇಬೇಕಾದ ಪ್ರಶ್ನೆಗಳು.
ಹೋಗಲಿ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರಾದರೂ ಯಾರು? ಹಣವಿದ್ದವರು ಮಾತ್ರ. ಯಾಕೆಂದರೆ ಬಡ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ ೭೦೦ ರೂಪಾಯಿಗಳಷ್ಟನ್ನು ಕಟ್ಟಿ ಮರುಮೌಲ್ಯಮಾಪನ ಮಾಡಿಸುವುದಕ್ಕೆ ಸಾಧ್ಯವೇ? ಹಾಗಾಗಿ ಅಂತಹ ವಿದ್ಯಾರ್ಥಿಗಳು ಸಿಕ್ಕಿದ ಅಂಕಗಳಲ್ಲೇ ಸಂತೋಷಪಡಬೇಕಾಗುತ್ತದೆ. ಹೀಗಿರುವ ವ್ಯವಸ್ಥೆಯಲ್ಲಿ ಸರಕಾರ ಬಡವರಿಗೆ ಹೇಗೆ ನ್ಯಾಯ ಸಲ್ಲಿಸಿದಂತಾಗುತ್ತದೆ? ಮೊದಲ ಮೌಲ್ಯಮಾಪನವನ್ನೇ ಅಚ್ಚುಕಟ್ಟಾಗಿ ಮಾಡುವಂತೆ ವ್ಯವಸ್ಥೆ ಮಾಡಿದರೆ, ಮರುಮೌಲ್ಯಮಾಪನದ ಅರ್ಜಿಗಳ ಸಂಖ್ಯೆಯನ್ನು ಕಡಮೆಗೊಳಿಸುವುದಕ್ಕೆ ಸಾಧ್ಯವಿಲ್ಲವೇ? ಮರುಮೌಲ್ಯಮಾಪನದ ಅರ್ಜಿಗಳ ಸಂಖ್ಯೆ ಹೆಚ್ಚಿದಷ್ಟೂ ಅದು ಮೌಲ್ಯಮಾಪನದ ಗುಣಮಟ್ಟ ಕಡಮೆ ಆಗುತ್ತಿರುವುದಕ್ಕೆ ಪುರಾವೆ ಆಗುವುದಿಲ್ಲವೇ?
ಅಕ್ಷರ ಸಿ. ದಾಮ್ಲೆ.
ಸಸ್ಯ ಸಾಕೋ? ಪ್ರಾಣಿಯೇ ಬೇಕೋ?
ಇದು ಮೇ 25ರ ಕನ್ನಡ ಪ್ರಭ ಪತ್ರಿಕೆಯ 'ಕಾಲೇಜು ರಂಗ' ಪುರವಣಿಯಲ್ಲಿ ಪ್ರಕಟಗೊಂಡಿದೆ.
ಆಹಾರ ಅನ್ನುವುದು ನಮ್ಮ ದೇಹ ಪೋಷಣೆಗೆ ಬೇಕಾದ್ದು. ಅದು ಸಸ್ಯಾಹಾರವೇ ಆಗಿರಬಹುದು, ಮಾಂಸಾಹಾರವೇ ಆಗಿರಬಹುದು. ಯಾವುದಾದರೂ ನಮ್ಮ ದೇಹಕ್ಕೆ ಪೋಷಣೆ ನೀಡುತ್ತದೆ. ಸಸ್ಯಾಹಾರಿಗಳು, ಮಾಂಸಾಹಾರಿಗಳನ್ನು ಪ್ರಾಣಿಹತ್ಯೆ ಮಾಡುತ್ತಾರೆಂದು ವಿನಾಕಾರಣ ತೆಗಳುವುದು, ಬೈಯ್ಯುವುದು, ಅಸಹನೆ ವ್ಯಕ್ತಪಡಿಸುವುದು ಅಗತ್ಯವಿಲ್ಲ. ಜನ ಅವರಿಗಿಷ್ಟವಾದ ಆಹಾರ ಕ್ರಮ ಇಟ್ಟುಕೊಳ್ಳುತ್ತಾರೆ. ಕಳೆದ ವಾರ, ರೂಪಶ್ರೀ ನಾಗರಾಜ್ ರವರು ಇಷ್ಟಕ್ಕೇ ವಾದ ನಿಲ್ಲಿಸಿದ್ದರೆ ನನಗೆ ಬರೆಯುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಯಾಕೆಂದರೆ ತನ್ನ ಆಹಾರ ಕ್ರಮವನ್ನು ನಿರ್ಧರಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಅದು ಆತನ ವ್ಯಕ್ತಿಸ್ವಾತಂತ್ರ್ಯ ಎಂದೇ ನಾನೂ ಕೂಡಾ ಪರಿಗಣಿಸುತ್ತೇನೆ.
ಸಸ್ಯಕ್ಕೂ ಜೀವವಿದೆ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟವರು ನಮ್ಮ ದೇಶದ ಹಿರಿಯ, ಪ್ರಖ್ಯಾತ ಸಸ್ಯಶಾಸ್ತ್ರಜ್ಞ ಡಾ
ಚಗದೀಶಚಂದ್ರ ಬೋಸ್ ರವರು. ಅಲ್ಲಿವರೆಗೆ ಸಸ್ಯಗಳಿಗೆ ಜೀವ ಇಲ್ಲ ಎಂಬುದಾಗಿ ಜಗತ್ತು ನಂಬಿತ್ತು. ಆನಂತರದ ದಿನಗಳಲ್ಲಿ ಸಸ್ಯಗಳ ಸ್ಪಂದನೆಗಳ ಕುರಿತು ಆಳವಾದ ಅಧ್ಯಯನಗಳು ನಡೆದಿವೆ. ಹಾಗಾಗಿ ಸಸ್ಯಗಳಿಗೂ ನೋವಾಗುತ್ತದೆ ಎಂಬ ವಿಷಯವನ್ನು ನಾವಿಂದು ಅರಿತುಕೊಂಡಿದ್ದೇವೆ. ವಾಸ್ತವಿಕವಾಗಿಯಾದರೆ, ನೋವು ಎಂಬ ಸಂವೇದನೆ ಇರುವುದು ಪ್ರಾಣಿಗಳಿಗೆ ಮಾತ್ರ. ಯಾಕೆಂದರೆ ಸಸ್ಯಗಳಲ್ಲಿ ನರಕೋಶ ಇಲ್ಲ. ಆದರೂ ನಾವು ಸಸ್ಯದ ಗೆಲ್ಲು ಕಡಿದಾಗಲೋ, ಹಣ್ಣು ಕಿತ್ತಾಗಲೋ ನೀರು ಒಸರುವುದನ್ನು ಕಂಡು ಸಸ್ಯಕ್ಕೂ ನೋವಾಗುತ್ತದೆ ಎಂದು ನಾವು ಹೇಳುತ್ತೇವೆ. ಆದರೆ ಈ ನೋವು ಪ್ರಾಣಿಯನ್ನು ಕೊಂದಷ್ಟು ದೊಡ್ಡ ಪಾಪವೇ? ಖಂಡಿತಾ ಇಲ್ಲ. ಯಾಕೆಂದರೆ ಪ್ರತಿಯೊಂದು ಜೀವಿಗೂ ಈ ಲೋಕದಲ್ಲಿ ನಮ್ಮ ಹಾಗೇ ಜೀವಿಸುವ ಹಕ್ಕಿದೆ. ಪ್ರಾಣಿಯನ್ನು ಕೊಂದ ಮೇಲೆ ಮುಗಿಯಿತು. ಆ ಜೀವ ಮರಳಿ ಬರಲಾರದು. ಆದರೆ ಸಸ್ಯಗಳಲ್ಲಿ ಹಾಗಲ್ಲ. ಹೋದ ಕಾಯಿಯನ್ನು ಅಥವಾ ಹಣ್ಣನ್ನು ಸಸ್ಯ ಮರಳಿ ಪಡೆಯಬಹುದು. ಉದುರಿದ ಅಥವಾ ಕಿತ್ತ ಎಲೆಯನ್ನು ಮತ್ತೆ ಚಿಗುರಿಸಿಕೊಳ್ಳಬಹುದು. ಎಷ್ಟೋ ಬಾರಿ ಸಸ್ಯವೇ ನೈಸರ್ಗಿಕವಾಗಿ ತನ್ನ ಎಲೆಗಳನ್ನು, ಕಾಯಿಗಳನ್ನು ಉದುರಿಸುತ್ತದೆ. ಹಾಗಾಗಿ ಸಸ್ಯಾಹಾರಿಗಳು ಒಂದು ಜೀವಿಯ ಹತ್ಯೆಯನ್ನು ಮಾಡುವುದಿಲ್ಲ. ಅಥವಾ ತರಕಾರಿ ಗಿಡವು ರಹಸ್ಯವಾಗಿ ಸಾಯುವುದೂ ಇಲ್ಲ.
ಹಿಂಸೆಯ ವಿಷಯದೊಂದಿಗೇ ನಾವು ಇನ್ನೊಂದು ಗಮನಿಸಬೇಕಾದದ್ದು ನಮ್ಮ ಹಲ್ಲಿನ ರಚನೆ. ನಮ್ಮ ಕೋರೆ ಹಲ್ಲುಗಳು ಮಾಂಸಾಹಾರಿ ಪ್ರಾಣಿಗಳ ಕೋರೆಗಳಷ್ಟು ಹರಿತವಾಗಿಲ್ಲ. ಯಾಕೆಂದರೆ ಮನುಷ್ಯನ ಮೂಲ ಆಹಾರವೇ ಸಸ್ಯಾಹಾರ. ಇನ್ನು ಮಾಂಸಾಹಾರ ಮೂಲದಿಂದಲೇ ನಮಗೆ ಹಲವಾರು ಚರ್ಮ ರೋಗಗಳು, ಕೊಬ್ಬಿನ ತೊಂದರೆಗಳು ಬಾಧೆ ಕೊಡುತ್ತವೆ. ಹೀಗಿದ್ದೂ ಅನೇಕ ಮಂದಿಗೆ ಮಾಂಸವೇ ನಿತ್ಯದಾಹಾರ. ಇರಲಿ. ಬೇಡವೆನ್ನಲಾರೆ. ಆದರೆ ನೀವು ಮಾಡುತ್ತಿರುವುದು ನ್ಯಾಯವೇ ಎಂಬುದನ್ನು ಯೋಚಿಸಿ ಎಂದು ಮಾತ್ರ ಹೇಳಬಲ್ಲೆ.
ಆಹಾರ ಅನ್ನುವುದು ನಮ್ಮ ದೇಹ ಪೋಷಣೆಗೆ ಬೇಕಾದ್ದು. ಅದು ಸಸ್ಯಾಹಾರವೇ ಆಗಿರಬಹುದು, ಮಾಂಸಾಹಾರವೇ ಆಗಿರಬಹುದು. ಯಾವುದಾದರೂ ನಮ್ಮ ದೇಹಕ್ಕೆ ಪೋಷಣೆ ನೀಡುತ್ತದೆ. ಸಸ್ಯಾಹಾರಿಗಳು, ಮಾಂಸಾಹಾರಿಗಳನ್ನು ಪ್ರಾಣಿಹತ್ಯೆ ಮಾಡುತ್ತಾರೆಂದು ವಿನಾಕಾರಣ ತೆಗಳುವುದು, ಬೈಯ್ಯುವುದು, ಅಸಹನೆ ವ್ಯಕ್ತಪಡಿಸುವುದು ಅಗತ್ಯವಿಲ್ಲ. ಜನ ಅವರಿಗಿಷ್ಟವಾದ ಆಹಾರ ಕ್ರಮ ಇಟ್ಟುಕೊಳ್ಳುತ್ತಾರೆ. ಕಳೆದ ವಾರ, ರೂಪಶ್ರೀ ನಾಗರಾಜ್ ರವರು ಇಷ್ಟಕ್ಕೇ ವಾದ ನಿಲ್ಲಿಸಿದ್ದರೆ ನನಗೆ ಬರೆಯುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಯಾಕೆಂದರೆ ತನ್ನ ಆಹಾರ ಕ್ರಮವನ್ನು ನಿರ್ಧರಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಅದು ಆತನ ವ್ಯಕ್ತಿಸ್ವಾತಂತ್ರ್ಯ ಎಂದೇ ನಾನೂ ಕೂಡಾ ಪರಿಗಣಿಸುತ್ತೇನೆ.
ಸಸ್ಯಕ್ಕೂ ಜೀವವಿದೆ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟವರು ನಮ್ಮ ದೇಶದ ಹಿರಿಯ, ಪ್ರಖ್ಯಾತ ಸಸ್ಯಶಾಸ್ತ್ರಜ್ಞ ಡಾ
ಚಗದೀಶಚಂದ್ರ ಬೋಸ್ ರವರು. ಅಲ್ಲಿವರೆಗೆ ಸಸ್ಯಗಳಿಗೆ ಜೀವ ಇಲ್ಲ ಎಂಬುದಾಗಿ ಜಗತ್ತು ನಂಬಿತ್ತು. ಆನಂತರದ ದಿನಗಳಲ್ಲಿ ಸಸ್ಯಗಳ ಸ್ಪಂದನೆಗಳ ಕುರಿತು ಆಳವಾದ ಅಧ್ಯಯನಗಳು ನಡೆದಿವೆ. ಹಾಗಾಗಿ ಸಸ್ಯಗಳಿಗೂ ನೋವಾಗುತ್ತದೆ ಎಂಬ ವಿಷಯವನ್ನು ನಾವಿಂದು ಅರಿತುಕೊಂಡಿದ್ದೇವೆ. ವಾಸ್ತವಿಕವಾಗಿಯಾದರೆ, ನೋವು ಎಂಬ ಸಂವೇದನೆ ಇರುವುದು ಪ್ರಾಣಿಗಳಿಗೆ ಮಾತ್ರ. ಯಾಕೆಂದರೆ ಸಸ್ಯಗಳಲ್ಲಿ ನರಕೋಶ ಇಲ್ಲ. ಆದರೂ ನಾವು ಸಸ್ಯದ ಗೆಲ್ಲು ಕಡಿದಾಗಲೋ, ಹಣ್ಣು ಕಿತ್ತಾಗಲೋ ನೀರು ಒಸರುವುದನ್ನು ಕಂಡು ಸಸ್ಯಕ್ಕೂ ನೋವಾಗುತ್ತದೆ ಎಂದು ನಾವು ಹೇಳುತ್ತೇವೆ. ಆದರೆ ಈ ನೋವು ಪ್ರಾಣಿಯನ್ನು ಕೊಂದಷ್ಟು ದೊಡ್ಡ ಪಾಪವೇ? ಖಂಡಿತಾ ಇಲ್ಲ. ಯಾಕೆಂದರೆ ಪ್ರತಿಯೊಂದು ಜೀವಿಗೂ ಈ ಲೋಕದಲ್ಲಿ ನಮ್ಮ ಹಾಗೇ ಜೀವಿಸುವ ಹಕ್ಕಿದೆ. ಪ್ರಾಣಿಯನ್ನು ಕೊಂದ ಮೇಲೆ ಮುಗಿಯಿತು. ಆ ಜೀವ ಮರಳಿ ಬರಲಾರದು. ಆದರೆ ಸಸ್ಯಗಳಲ್ಲಿ ಹಾಗಲ್ಲ. ಹೋದ ಕಾಯಿಯನ್ನು ಅಥವಾ ಹಣ್ಣನ್ನು ಸಸ್ಯ ಮರಳಿ ಪಡೆಯಬಹುದು. ಉದುರಿದ ಅಥವಾ ಕಿತ್ತ ಎಲೆಯನ್ನು ಮತ್ತೆ ಚಿಗುರಿಸಿಕೊಳ್ಳಬಹುದು. ಎಷ್ಟೋ ಬಾರಿ ಸಸ್ಯವೇ ನೈಸರ್ಗಿಕವಾಗಿ ತನ್ನ ಎಲೆಗಳನ್ನು, ಕಾಯಿಗಳನ್ನು ಉದುರಿಸುತ್ತದೆ. ಹಾಗಾಗಿ ಸಸ್ಯಾಹಾರಿಗಳು ಒಂದು ಜೀವಿಯ ಹತ್ಯೆಯನ್ನು ಮಾಡುವುದಿಲ್ಲ. ಅಥವಾ ತರಕಾರಿ ಗಿಡವು ರಹಸ್ಯವಾಗಿ ಸಾಯುವುದೂ ಇಲ್ಲ.
ಹಿಂಸೆಯ ವಿಷಯದೊಂದಿಗೇ ನಾವು ಇನ್ನೊಂದು ಗಮನಿಸಬೇಕಾದದ್ದು ನಮ್ಮ ಹಲ್ಲಿನ ರಚನೆ. ನಮ್ಮ ಕೋರೆ ಹಲ್ಲುಗಳು ಮಾಂಸಾಹಾರಿ ಪ್ರಾಣಿಗಳ ಕೋರೆಗಳಷ್ಟು ಹರಿತವಾಗಿಲ್ಲ. ಯಾಕೆಂದರೆ ಮನುಷ್ಯನ ಮೂಲ ಆಹಾರವೇ ಸಸ್ಯಾಹಾರ. ಇನ್ನು ಮಾಂಸಾಹಾರ ಮೂಲದಿಂದಲೇ ನಮಗೆ ಹಲವಾರು ಚರ್ಮ ರೋಗಗಳು, ಕೊಬ್ಬಿನ ತೊಂದರೆಗಳು ಬಾಧೆ ಕೊಡುತ್ತವೆ. ಹೀಗಿದ್ದೂ ಅನೇಕ ಮಂದಿಗೆ ಮಾಂಸವೇ ನಿತ್ಯದಾಹಾರ. ಇರಲಿ. ಬೇಡವೆನ್ನಲಾರೆ. ಆದರೆ ನೀವು ಮಾಡುತ್ತಿರುವುದು ನ್ಯಾಯವೇ ಎಂಬುದನ್ನು ಯೋಚಿಸಿ ಎಂದು ಮಾತ್ರ ಹೇಳಬಲ್ಲೆ.
Sunday, May 9, 2010
ಲೋಕೇಶನ ವಿಫಲತೆಗೆ ಯಾರು ಹೊಣೆ?
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು ೬೩% ಶೇಕಡಾದಷ್ಟು ಮಂದಿ ಮಾತ್ರ ತೇರ್ಗಡೆ ಹೊಂದಿದ್ದಾರೆ. ಇನ್ನುಳಿದವರು ಏನಾಗಿದ್ದಾರೆ? ಯಾಕೆ ಫೇಲ್ ಆಗಿದ್ದಾರೆ? ಒಬ್ಬೊಬ್ಬರದ್ದು ಒಂದೊಂದು ಕಾರಣ ಇರಬಹುದು. ಒಬ್ಬನಿಗೆ ಅನಾರೋಗ್ಯ ಇದ್ದಿರಬಹುದು. ಇನ್ನೊಬ್ಬನಿಗೆ ಓದಿದ್ದು ತಲೆಗೆ ಹತ್ತದೆ ಇದ್ದಿರಬಹುದು, ಮತ್ತೊಬ್ಬನಿಗೆ ತನ್ನ ಆಲಸ್ಯವೇ ಮುಳುವಾಗಿರಬಹುದು. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಲ್ಲದೇ ಪಾಠಗಳು ಸರಿಯಾಗಿ ಆಗದೇ ಪಠ್ಯ ಪುಸ್ತಕದಲ್ಲಿ ನೀಡಿದ ವಿಷಯಗಳನ್ನು ಸ್ವತಂತ್ರನಾಗಿ ಕಲಿತು ಜೀರ್ಣೆಸಿಕೊಳ್ಳಲಾಗದೆ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ತೇರ್ಗಡೆಯಾಗಲು ವಿಫಲನಾದ ಒಬ್ಬ ಹುಡುಗನ ಬಗ್ಗೆ.
ಒಂದು ಹಳ್ಳಿಯ ಸರಕಾರಿ ಶಾಲೆಯ ವಿದ್ಯಾರ್ಥಿ ಲೋಕೇಶ. ಮನೆಯಲ್ಲಿ ಉತ್ತಮವಾದ ವಿದ್ಯಾಭ್ಯಾಸ ಹೊಂದಿದವರಾರೂ ಇಲ್ಲ. ಮನೆಯಲ್ಲಿ ಕಲಿಯುವಿಕೆಯಲ್ಲಿ ಎಸ್.ಎಸ್.ಎಲ್.ಸಿ. ತನಕ ಮುಟ್ಟಿದವನು ಇವನೊಬ್ಬನೇ. ಹಾಗಾಗಿ ಮನೆಯಲ್ಲಾಗಲೀ, ಅಕ್ಕ ಪಕ್ಕದ ಮನೆಗಳಲ್ಲಾಗಲೀ ಹೇಳಿಕೊಡುವವರಿಲ್ಲ. ಶಾಲೆಯಲ್ಲಿ ಮೇಷ್ಟ್ರು ಏನು ಹೇಳಿಕೊಡುತ್ತಾರೋ ಆಷ್ಟೇ. ಇರುವ ಮೇಷ್ಟ್ರುಗಳು ಪಾಠ ಮಾಡುವಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಆದರೆ ಕೆಲವೊಂದು ವಿಷಯಗಳಿಗೆ ಪಾಠಮಾಡುವುದಕ್ಕೆ ಶಿಕ್ಷಕರೇ ಇಲ್ಲದಿದ್ದರೆ? ಆ ವಿಷಯವನ್ನು ಅಭ್ಯಸಿಸುವ ಆಸೆ ಕೈಬಿಡಬೇಕಷ್ಟೆ ಹೊರತು ಬೇರೆ ದಾರಿಯಿಲ್ಲ. ಯಾಕೆಂದರೆ ಇರುವ ಮೇಷ್ಟ್ರುಗಳಿಗೆ ಆ ವಿಷಯವನ್ನೂ ಪಾಠ ಮಾಡುವುದಕ್ಕೆ ಸಮಯ ಸಾಕಾಗುವುದಿಲ್ಲ. ಹೋಗಲಿ, ಹಳ್ಳಿಯಿಂದ ದೂರದ ಪೇಟೆಗೆ ಹೋಗಿ ಅಲ್ಲಿ ಯಾವುದಾದರೂ ಮೇಷ್ಟ್ರ ಹತ್ತಿರ ಟ್ಯೂಷನ್ ಹೇಳಿಸಿಕೊಳ್ಳೋಣವೆಂದರೆ ಅಷ್ಟೆಲ್ಲಾ ಖರ್ಚು ಮಾಡುವುದಕ್ಕೆ ಮನೆಯಲ್ಲಿ ಹಣ ಇಲ್ಲ. ಬೇರೆ ಉಪಾಯವಿಲ್ಲದೇ, ಇದ್ದದ್ದರಲ್ಲೇ ಸುಧಾರಿಸಿಕೊಂಡು ಪರೀಕ್ಷೆ ಬರೆದ.
ರಿಸಲ್ಟ್ ಬರುವ ಮೊದಲೇ ಇಂಗ್ಲಿಷ್ ನಲ್ಲಿ ತಾನು ಪಾಸ್ ಆಗುವುದರ ಬಗ್ಗೆ ಅಪನಂಬಿಕೆ ಇತ್ತು. ತನ್ನನ್ನು ತಾನು ಅಷ್ಟರ ಮಟ್ಟಿಗೆ ವಿಮರ್ಶಿಸಿಕೊಳ್ಳಬಲ್ಲ ಬುದ್ಧಿವಂತ. ಇಂದು ರಿಸಲ್ಟ್ ಬಂದಾಗ ಕಂಡದ್ದೂ ಅದೇ. ಇಂಗ್ಲಿಷ್ ವಿಷಯದಲ್ಲಿ ಒಂದಂಕಿ. ವಿಜ್ಞಾನದಲ್ಲಿ ಪಾಸ್ ಆಗುವುದಕ್ಕೆ ಒಂಭತ್ತು ಅಂಕಗಳು ಕಡಮೆ. ಉಳಿದೆಲ್ಲಾ ವಿಷಯಗಳಲ್ಲೂ ತೇರ್ಗಡೆಯಾಗಿದ್ದಾನೆ. ತನ್ನ ಅಂಕಗಳನ್ನು ನೋಡಿದಾಗ ಆತನ ಕನಸು ಕಂಗಳು ಬತ್ತಿ ಹೋದವು.
ಈ ಕಥೆಯನ್ನು ಕೇಳಿದಾಗ ಕೆಲವು ಶಿಕ್ಷಣ ತಜ್ಞರು " ಈ ಪರೀಕ್ಷೆಯೊಂದೇ ಜೀವನದ ಯಶಸ್ಸನ್ನು ನಿರ್ಧರಿಸುವಂಥದ್ದಲ್ಲ. ಆತ ಮರು ಯತ್ನ ಮಾಡಬಹುದು. ಮತ್ತೆ ತೇರ್ಗಡೆಯಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಧೃತಿಗೆಡಬೇಕಾಗಿಲ್ಲ" ಎಂದೆಲ್ಲಾ ಧೈರ್ಯವನ್ನು ತುಂಬಬಹುದು. ನಾನೂ ಇದನ್ನು ಒಪ್ಪುತ್ತೇನೆ. ಆದರೆ ನನ್ನ ಪ್ರಶ್ನೆ, ಆತನಿಗೆ ಈಗ ಆದ ನೋವಿಗೆ ಯಾರು ಕಾರಣರು? ಆತ ಓದುವುದರಲ್ಲಿ ಉದಾಸೀನನಾಗಿದ್ದರೆ ಅವನಿಗೆ ಮಾಡಿದ್ದುಣ್ಣೋ ಮಹರಾಯ ಎನ್ನಬಹುದಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಯಾಕೆಂದರೆ ಕಲಿಸುವ ಶಿಕ್ಷಕರಿಲ್ಲದೇ ತನ್ನ ಭಾಷೆಯಲ್ಲದ ಇಂಗ್ಲಿಷ್ ನ್ನು ಕಲಿಯುವುದು ಅಷ್ಟು ಸುಲಭವೇ? ಖಂಡಿತಾ ಇಲ್ಲ. ಹಾಗಾಗಿ ನನ್ನ ಪ್ರಕಾರ ಲೋಕೇಶ ಮತ್ತು ಅವನಂತಹ ಅನೇಕ ಹುಡುಗರ ವಿಫಲತೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕರ್ನಾಟಕದ ರಾಜ್ಯ ಶಿಕ್ಷಣ ಇಲಾಖೆಯೇ ಕಾರಣ. ಸರಿಯಾದ ಕಾಲಕ್ಕೆ ಆ ಶಾಲೆಗೆ ಶಿಕ್ಷಕರ ನೇಮಕಾತಿ ನಡೆಯುತ್ತಿದ್ದರೆ ಈ ಬಡ ವಿದ್ಯಾರ್ಥಿಗಳಿಗೂ ಒಳ್ಳೆಯ ಶಿಕ್ಷಣ ಸಿಗುತ್ತಿತ್ತು. ಎಸ್.ಎಸ್.ಎಲ್.ಸಿ. ಯಲ್ಲಿ ಪಾಸ್ ಆದ ಸಂತೋಷವನ್ನು ಅವರೂ ಆನಂದಿಸಬಹುದಿತ್ತು. ಆದರೆ ಈಗ ಆ ಆನಂದದ ಚಿಗುರು ಮುರುಟಿ ಹೋಗಿದೆ. ಇಂತಹ ಶಾಲೆಗಳನ್ನಿಟ್ಟುಕೊಂಡು, ಮಕ್ಕಳು ಬರುವುದಿಲ್ಲ ಎಂದರೆ ಅದಕ್ಕೆ ಅರ್ಥವುಂಟೇ? ಆದ್ದರಿಂದ ಮೊದಲು ದೋಷಗಳನ್ನು ಆದಷ್ಟು ಬೇಗ ಸರಿಪಡಿಸಿ ಶಿಕ್ಷಣ ಇಲಾಖೆ ಇರುವ ಶಾಲೆಗಳೆಗಳನ್ನು ಮುಚ್ಚದೇ ಸೂಕ್ತವಾದ ಸೌಲಭ್ಯಗಳನ್ನು ನೀಡಿ, ಅದು ಸರಿಯಾಗಿ ಕಾರ್ಯಗತವಾಗುವಂತೆ ನೋಡಿಕೊಂಡು, ಕಲಿಯುವ ಆಸ್ಥೆ ಇರುವ ಸಾವಿರಾರು ಬಡ ಹುಡುಗರ ಕನಸುಗಳಿಗೆ ಜೀವ ತುಂಬುವ ಕಡೆಗೆ ಗಮನ ಹರಿಸಬೇಕು.
ಅಕ್ಷರ ದಾಮ್ಲೆ.
ಒಂದು ಹಳ್ಳಿಯ ಸರಕಾರಿ ಶಾಲೆಯ ವಿದ್ಯಾರ್ಥಿ ಲೋಕೇಶ. ಮನೆಯಲ್ಲಿ ಉತ್ತಮವಾದ ವಿದ್ಯಾಭ್ಯಾಸ ಹೊಂದಿದವರಾರೂ ಇಲ್ಲ. ಮನೆಯಲ್ಲಿ ಕಲಿಯುವಿಕೆಯಲ್ಲಿ ಎಸ್.ಎಸ್.ಎಲ್.ಸಿ. ತನಕ ಮುಟ್ಟಿದವನು ಇವನೊಬ್ಬನೇ. ಹಾಗಾಗಿ ಮನೆಯಲ್ಲಾಗಲೀ, ಅಕ್ಕ ಪಕ್ಕದ ಮನೆಗಳಲ್ಲಾಗಲೀ ಹೇಳಿಕೊಡುವವರಿಲ್ಲ. ಶಾಲೆಯಲ್ಲಿ ಮೇಷ್ಟ್ರು ಏನು ಹೇಳಿಕೊಡುತ್ತಾರೋ ಆಷ್ಟೇ. ಇರುವ ಮೇಷ್ಟ್ರುಗಳು ಪಾಠ ಮಾಡುವಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಆದರೆ ಕೆಲವೊಂದು ವಿಷಯಗಳಿಗೆ ಪಾಠಮಾಡುವುದಕ್ಕೆ ಶಿಕ್ಷಕರೇ ಇಲ್ಲದಿದ್ದರೆ? ಆ ವಿಷಯವನ್ನು ಅಭ್ಯಸಿಸುವ ಆಸೆ ಕೈಬಿಡಬೇಕಷ್ಟೆ ಹೊರತು ಬೇರೆ ದಾರಿಯಿಲ್ಲ. ಯಾಕೆಂದರೆ ಇರುವ ಮೇಷ್ಟ್ರುಗಳಿಗೆ ಆ ವಿಷಯವನ್ನೂ ಪಾಠ ಮಾಡುವುದಕ್ಕೆ ಸಮಯ ಸಾಕಾಗುವುದಿಲ್ಲ. ಹೋಗಲಿ, ಹಳ್ಳಿಯಿಂದ ದೂರದ ಪೇಟೆಗೆ ಹೋಗಿ ಅಲ್ಲಿ ಯಾವುದಾದರೂ ಮೇಷ್ಟ್ರ ಹತ್ತಿರ ಟ್ಯೂಷನ್ ಹೇಳಿಸಿಕೊಳ್ಳೋಣವೆಂದರೆ ಅಷ್ಟೆಲ್ಲಾ ಖರ್ಚು ಮಾಡುವುದಕ್ಕೆ ಮನೆಯಲ್ಲಿ ಹಣ ಇಲ್ಲ. ಬೇರೆ ಉಪಾಯವಿಲ್ಲದೇ, ಇದ್ದದ್ದರಲ್ಲೇ ಸುಧಾರಿಸಿಕೊಂಡು ಪರೀಕ್ಷೆ ಬರೆದ.
ರಿಸಲ್ಟ್ ಬರುವ ಮೊದಲೇ ಇಂಗ್ಲಿಷ್ ನಲ್ಲಿ ತಾನು ಪಾಸ್ ಆಗುವುದರ ಬಗ್ಗೆ ಅಪನಂಬಿಕೆ ಇತ್ತು. ತನ್ನನ್ನು ತಾನು ಅಷ್ಟರ ಮಟ್ಟಿಗೆ ವಿಮರ್ಶಿಸಿಕೊಳ್ಳಬಲ್ಲ ಬುದ್ಧಿವಂತ. ಇಂದು ರಿಸಲ್ಟ್ ಬಂದಾಗ ಕಂಡದ್ದೂ ಅದೇ. ಇಂಗ್ಲಿಷ್ ವಿಷಯದಲ್ಲಿ ಒಂದಂಕಿ. ವಿಜ್ಞಾನದಲ್ಲಿ ಪಾಸ್ ಆಗುವುದಕ್ಕೆ ಒಂಭತ್ತು ಅಂಕಗಳು ಕಡಮೆ. ಉಳಿದೆಲ್ಲಾ ವಿಷಯಗಳಲ್ಲೂ ತೇರ್ಗಡೆಯಾಗಿದ್ದಾನೆ. ತನ್ನ ಅಂಕಗಳನ್ನು ನೋಡಿದಾಗ ಆತನ ಕನಸು ಕಂಗಳು ಬತ್ತಿ ಹೋದವು.
ಈ ಕಥೆಯನ್ನು ಕೇಳಿದಾಗ ಕೆಲವು ಶಿಕ್ಷಣ ತಜ್ಞರು " ಈ ಪರೀಕ್ಷೆಯೊಂದೇ ಜೀವನದ ಯಶಸ್ಸನ್ನು ನಿರ್ಧರಿಸುವಂಥದ್ದಲ್ಲ. ಆತ ಮರು ಯತ್ನ ಮಾಡಬಹುದು. ಮತ್ತೆ ತೇರ್ಗಡೆಯಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ಧೃತಿಗೆಡಬೇಕಾಗಿಲ್ಲ" ಎಂದೆಲ್ಲಾ ಧೈರ್ಯವನ್ನು ತುಂಬಬಹುದು. ನಾನೂ ಇದನ್ನು ಒಪ್ಪುತ್ತೇನೆ. ಆದರೆ ನನ್ನ ಪ್ರಶ್ನೆ, ಆತನಿಗೆ ಈಗ ಆದ ನೋವಿಗೆ ಯಾರು ಕಾರಣರು? ಆತ ಓದುವುದರಲ್ಲಿ ಉದಾಸೀನನಾಗಿದ್ದರೆ ಅವನಿಗೆ ಮಾಡಿದ್ದುಣ್ಣೋ ಮಹರಾಯ ಎನ್ನಬಹುದಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಯಾಕೆಂದರೆ ಕಲಿಸುವ ಶಿಕ್ಷಕರಿಲ್ಲದೇ ತನ್ನ ಭಾಷೆಯಲ್ಲದ ಇಂಗ್ಲಿಷ್ ನ್ನು ಕಲಿಯುವುದು ಅಷ್ಟು ಸುಲಭವೇ? ಖಂಡಿತಾ ಇಲ್ಲ. ಹಾಗಾಗಿ ನನ್ನ ಪ್ರಕಾರ ಲೋಕೇಶ ಮತ್ತು ಅವನಂತಹ ಅನೇಕ ಹುಡುಗರ ವಿಫಲತೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕರ್ನಾಟಕದ ರಾಜ್ಯ ಶಿಕ್ಷಣ ಇಲಾಖೆಯೇ ಕಾರಣ. ಸರಿಯಾದ ಕಾಲಕ್ಕೆ ಆ ಶಾಲೆಗೆ ಶಿಕ್ಷಕರ ನೇಮಕಾತಿ ನಡೆಯುತ್ತಿದ್ದರೆ ಈ ಬಡ ವಿದ್ಯಾರ್ಥಿಗಳಿಗೂ ಒಳ್ಳೆಯ ಶಿಕ್ಷಣ ಸಿಗುತ್ತಿತ್ತು. ಎಸ್.ಎಸ್.ಎಲ್.ಸಿ. ಯಲ್ಲಿ ಪಾಸ್ ಆದ ಸಂತೋಷವನ್ನು ಅವರೂ ಆನಂದಿಸಬಹುದಿತ್ತು. ಆದರೆ ಈಗ ಆ ಆನಂದದ ಚಿಗುರು ಮುರುಟಿ ಹೋಗಿದೆ. ಇಂತಹ ಶಾಲೆಗಳನ್ನಿಟ್ಟುಕೊಂಡು, ಮಕ್ಕಳು ಬರುವುದಿಲ್ಲ ಎಂದರೆ ಅದಕ್ಕೆ ಅರ್ಥವುಂಟೇ? ಆದ್ದರಿಂದ ಮೊದಲು ದೋಷಗಳನ್ನು ಆದಷ್ಟು ಬೇಗ ಸರಿಪಡಿಸಿ ಶಿಕ್ಷಣ ಇಲಾಖೆ ಇರುವ ಶಾಲೆಗಳೆಗಳನ್ನು ಮುಚ್ಚದೇ ಸೂಕ್ತವಾದ ಸೌಲಭ್ಯಗಳನ್ನು ನೀಡಿ, ಅದು ಸರಿಯಾಗಿ ಕಾರ್ಯಗತವಾಗುವಂತೆ ನೋಡಿಕೊಂಡು, ಕಲಿಯುವ ಆಸ್ಥೆ ಇರುವ ಸಾವಿರಾರು ಬಡ ಹುಡುಗರ ಕನಸುಗಳಿಗೆ ಜೀವ ತುಂಬುವ ಕಡೆಗೆ ಗಮನ ಹರಿಸಬೇಕು.
ಅಕ್ಷರ ದಾಮ್ಲೆ.
Friday, May 7, 2010
ಠಕ್ಕ ಯೋಗಿಗೆ ಮಾರು ಹೋಗುವಿರಾ?
ಈ ಲೇಖನವು ಮೇ ೬ರ ಮಣಿಪಾಲ ಆವೃತ್ತಿಯ ಉದಯವಾಣಿಯಲ್ಲಿ ಪ್ರಕಟಗೊಂಡಿದೆ.
ಇತ್ತೀಚೆಗೆ ದೇವ ಮಾನವರು ನಮ್ಮ ಸಮಾಜದಲ್ಲಿ ಹೆಚ್ಚಾಗುತ್ತಿದ್ದಾರೆ. ತಾನು ಮಹಾಜ್ಞಾನಿ ಎಂದು ತಮ್ಮನ್ನು ತಾವೇ ಹೇಳಿಕೊಂಡು ಜನರನ್ನು ಮರುಳು ಮಾಡುವ ದಂಧೆ ಭಾರತದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ನಮ್ಮ ಸಂಸ್ಕೃತಿಯ ರಕ್ಷಕರೆಂದು ಕರೆಸಿಕೊಳ್ಳುವ ಇಂತಹವರುಗಳ ನಿಜಬಣ್ಣ ಆಗಾಗ ಬಯಲಾಗುತ್ತಲೇ ಇರುತ್ತದೆ. ಹಾಗಂತ ಇವರುಗಳನ್ನು ನೋಡಿ, ಸಂನ್ಯಾಸಿಗಳೆಲ್ಲರೂ ಹೀಗೆಯೇ ಇರುತ್ತಾರೆನ್ನಲಾಗದು; ಯೋಗದ ಹೆಸರು ಹೇಳುವವರೆಲ್ಲರ ತೆರೆಯ ಮರೆಯ ಜೀವನ ಬೇರೆಯದೇ ಇರುತ್ತದೆ ಎಂದು ಸಾರಾಸಗಟಾಗಿ ಹೇಳುವ ಮೂರ್ಖತನವನ್ನು ನಾನು ತೋರಲಾರೆ. ಆದರೆ ನಿಜವಾದ ಯೋಗಿಗಳ, ಸಂನ್ಯಾಸಿಗಳ ಮಧ್ಯೆ ಇಂತಹ ದರಿದ್ರಗಳು ಸೇರಿಕೊಂಡಾಗ, ಎಲ್ಲಾ ಬಣ್ಣ ಮಸಿ ನುಂಗಿದಂತಾಗುವುದು ಸುಳ್ಳಲ್ಲ.
ನಿಮಗೆ ಆ ತೊಂದರೆ ಇದೆ, ಈ ತೊಂದರೆ ಇದೆ, ನೀವು ನಡೆಯುವುದು ಸರಿ ಇಲ್ಲ, ನಿಮ್ಮ ಹೊಟ್ಟೆಯ ಬೆಳವಣಿಗೆ ಸರಿ ಆಗಿಲ್ಲ, ಹೀಗೆ ಜನರ ಬಾಹ್ಯ ಸೌಂದರ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಹೇಳುವ ಮೂಲಕ, ನಿಜವಾಗಿ ಇಲ್ಲದಿದ್ದರೂ, ಇದೆ ಎಂದು ಬಹಳ ಜ್ಞಾನಿಯಂತೆ ಖಚಿತವಾಗಿ ಹೇಳುವ ಮೂಲಕ, ಜನರಲ್ಲಿ ’ತಾನು ಸರಿ ಇಲ್ಲ’ ಎಂಬ ಭಾವ ಮೂಡುವಂತೆ ಮಾಡಿ, ಅದಕ್ಕೆ ತಾನು ಪರಿಹಾರ ನೀಡುತ್ತೇನೆ ಅಂತ ಒಂದಿಷ್ಟು ಶಿಷ್ಯರನ್ನು ಸಂಪಾದಿಸುವ ಹಲವಾರು ಖದೀಮರನ್ನು ನಾವು ಇಂದಿನ ಸಮಾಜದಲ್ಲಿ ಕಾಣಬಹುದು. ಇಂತಹವರ ಶಿಷ್ಯವರ್ಗದಲ್ಲಿ ಡಾಕ್ಟರುಗಳು, ಇಂಜಿನಿಯರುಗಳು, ಅಥವಾ ಉನ್ನತ ವಿದ್ಯಾಭ್ಯಾಸವನ್ನು ಹೊಂದಿದ ವ್ಯಕ್ತಿಗಳೂ ಸೇರಿರುತ್ತಾರೆ. ಎಷ್ಟೋ ಬಾರಿ, ಚೆನ್ನಾಗಿ ವೈದ್ಯಕೀಯ ವಿಜ್ಞಾನವನ್ನು ಅಭ್ಯಸಿಸಿ, ತನ್ನ ದೇಹದ ಪ್ರತಿಯೊಂದು ಭಾಗದ ಕುರಿತು ಆಳವಾಗಿ ತಿಳಿದಿರುವ ಉತ್ತಮ ವೈದ್ಯರೂ ಇಂತಹವರ ಮಾತುಗಳನ್ನು ಕೇಳಿ ಮೌಢ್ಯಕ್ಕೊಳಗಾಗುತ್ತಾರೆ. ಸರಿಯಾಗಿಯೇ ಇರುವ ತಮ್ಮ ದೇಹಾಂಗ ರಚನೆಯ ಬಗ್ಗೆ ಸಂಶಯಿಸುತ್ತಾರೆ. ಮಾತಿನ ಜಾಣ್ಮೆ ಇರುವ ಸೊ ಕಾಲ್ಡ್ ಯೋಗಿಗಳು ಅವರನ್ನು ಚಿಕಿತ್ಸೆಯ ಹೆಸರಲ್ಲಿ ಬೇಕಾದಂತೆ ಬಳಸಿಕೊಳ್ಳುತ್ತಾರೆ (ಹೇಗಾದರೂ ಇರಬಹುದು).
ಪ್ರಾಯಶಃ ಕಲಿಯುವುದರಲ್ಲಿ ಜಾಣರಾಗಿದ್ದೂ, ವಿದ್ಯಾರ್ಥಿ ದೆಸೆಯಲ್ಲಿ ಪರೀಕ್ಷೆಗಾಗಿ ಪಠ್ಯದ ಓದನ್ನು ಬಿಟ್ಟು ಇನ್ನೇನನ್ನೂ ತಿಳಿದುಕೊಳ್ಳದೇ ಡಾಕ್ಟರ್ ಗಳೋ, ಇಂಜಿನಿಯರುಗಳೋ ಅಥವಾ ಇನ್ನೇನಾದರೂ ಆದ ವ್ಯಕ್ತಿಗಳು ಉದ್ಯೋಗಕ್ಕೆ ಸೇರಿದ ಬಳಿಕ ಕೆಲಸಗಳ ಒತ್ತಡದಿಂದ ಹೊರಬರಲಾಗದ ಸ್ಥಿತಿಯನ್ನು ತಲುಪಿದಾಗ, ಅವರಿಗೆ ಮೇಲೆ ಉಲ್ಲೇಖಿಸಿದಂತಹ ಮೋಸಗಾರರ ಮಾತುಗಳು ಹಿತವೆನಿಸುತ್ತವೆ. ಅವರು ಹೇಳಿ ಕೊಡುವ ಬಾಲಿಶ ಆಟಗಳು, ಏನೋ ಒಂದು ಸ್ವಲ್ಪ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳನ್ನು ಪರಿಹಾರವೆಂದು ತಿಳಿಯುತ್ತಾರೆ. ಇವರು ಹೇಳಿಕೊಡುವ ವಿಷಯಗಳೆಲ್ಲವೂ ಸರಿ ಇರುತ್ತದೆ ಅಂತೇನಿಲ್ಲ. ಮತ್ತು ಸರಿ ಇಲ್ಲದಾಗ ಅದರಿಂದ ತೊಂದರೆಯೂ ಇದೆ ಎಂಬುದೂ ತಿಳಿದಿರುವ ವಿಷಯವೇ. ಆದರೂ ಇವು ತಮ್ಮ ಸಮಸ್ಯೆಯಿಂದ ಸ್ವಲ್ಪ ಹೊರಬರಲು ಸಹಕಾರಿಯಾಗುತ್ತದೆಂದು ಅಚಲವಾಗಿ ನಂಬಿರುತ್ತಾರೆ. ಹೀಗೆ ತಮ್ಮ ಪರೀಕ್ಷಕ ದೃಷ್ಟಿಯನ್ನು ಕಳಕೊಂಡು ಆ ವ್ಯಕ್ತಿಯೇ ಲೋಕದಲ್ಲಿ ಸರ್ವ ಶ್ರೇಷ್ಠ ಯೋಗಿ ಎಂದು ನಂಬುತ್ತಾರೆ. ಇದು ಕಪಟಿಯಾದರೂ ಆಚಾರ್ಯ, ಗುರು, ಪಂಡಿತ ಅಂತ ಕರೆಸಿಕೊಳ್ಳುವುದಕ್ಕೆ ಆ ವ್ಯಕ್ತಿಗೆ ಸುಲಭವಾಗುತ್ತದೆ.
ಸಾಧಾರಣವಾಗಿ ಇಂತಹ ದುರ್ಜನರ ಗಾಳಕ್ಕೆ ಸುಲಭವಾಗಿ ಬೀಳುವವರು ಸ್ತ್ರೀಯರು. ಅದರಲ್ಲೂ ವಿವಾಹಿತ ಸ್ತ್ರೀಯರು ತಮ್ಮ ಹೊಸ ಪರಿಸ್ಥಿತಿಯಲ್ಲಿ ಭ್ರಮನಿರಸನಕ್ಕೊಳಗಾದಾಗ ಇಂತಹ ಕಪಟಿಗಳ ಸಂದರ್ಶನವಾದರೆ ಸುಲಭದಲ್ಲಿ ಬಲಿಬೀಳುತ್ತಾರೆ. ಆ ವ್ಯಕ್ತಿಯ ಪೂರ್ವಾಪರಗಳ ಕುರಿತು ವಿವೇಚಿಸದೇ ಆತನ ಶಿಷ್ಯೆಯರಾಗಿ ಬಿಡುತ್ತಾರೆ. ತಮ್ಮನ್ನು ತಾವು ಸರಿಮಾಡಿಕೊಳ್ಳುವ ಹಂಬಲದಿಂದ ಹೆಂಗಳೆಯರು ಗುರುಗಳ ಸೇವೆ ಮಾಡಲಾರಂಭಿಸುತ್ತಾರೆ, ಕಡೆಗೆ ಸೇವಿಸಲ್ಪಡುತ್ತಾರೆ. ಇದು ಈ ಗುರುಗಳೆಂದೆನಿಸಿಕೊಂಡವರಿಗೆ ಒಳ್ಳೆಯದೇ. ಅವರ ಪೂರ್ವಾಪರಗಳನ್ನು ಕುರಿತು ಪ್ರಶ್ನಿಸದಿರುವುದರಿಂದ ಕಪಟ ಯೋಗಿಗಳ "ನಿತ್ಯ ಸತ್ಯಗಳು" ಬಹಿರಂಗವಾಗುವುದೇ ಇಲ್ಲ. ಆದರೆ ಯಾವುದಾದರೂ ಟಿ.ವಿ. ಚಾನೆಲ್ಲೋ ಅಥವಾ ಪತ್ರಿಕೆಯವರೋ ಇಂತಹ ಗುರುವಿನ ನೈಜ ಜೀವನವನದ ಚಿತ್ರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಾಗ ಪಶ್ಚಾತ್ತಾಪ ಪಡುತ್ತಾರೆ. ಹಾಗಾಗಿ ಮತ್ತೆ ನೊಂದುಕೊಳ್ಳುವುದರ ಬದಲಾಗಿ ಮೊದಲೇ ವಿವೇಚನೆಯಿಂದ, ಯೋಗಿಗಳೆಂದು ಕರೆಸಿಕೊಳ್ಳುವವರ ಮಾತಿನ ಮೋಡಿಗೆ ಮಾರು ಹೋಗದೇ, ಅವರ ಬದುಕಿನ ಸತ್ಯವನ್ನು ಅರಿತೇ ಮುಂದುವರಿಯುವುದು ಒಳಿತಲ್ಲವೇ?
ಅಕ್ಷರ ದಾಮ್ಲೆ
ಇತ್ತೀಚೆಗೆ ದೇವ ಮಾನವರು ನಮ್ಮ ಸಮಾಜದಲ್ಲಿ ಹೆಚ್ಚಾಗುತ್ತಿದ್ದಾರೆ. ತಾನು ಮಹಾಜ್ಞಾನಿ ಎಂದು ತಮ್ಮನ್ನು ತಾವೇ ಹೇಳಿಕೊಂಡು ಜನರನ್ನು ಮರುಳು ಮಾಡುವ ದಂಧೆ ಭಾರತದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ನಮ್ಮ ಸಂಸ್ಕೃತಿಯ ರಕ್ಷಕರೆಂದು ಕರೆಸಿಕೊಳ್ಳುವ ಇಂತಹವರುಗಳ ನಿಜಬಣ್ಣ ಆಗಾಗ ಬಯಲಾಗುತ್ತಲೇ ಇರುತ್ತದೆ. ಹಾಗಂತ ಇವರುಗಳನ್ನು ನೋಡಿ, ಸಂನ್ಯಾಸಿಗಳೆಲ್ಲರೂ ಹೀಗೆಯೇ ಇರುತ್ತಾರೆನ್ನಲಾಗದು; ಯೋಗದ ಹೆಸರು ಹೇಳುವವರೆಲ್ಲರ ತೆರೆಯ ಮರೆಯ ಜೀವನ ಬೇರೆಯದೇ ಇರುತ್ತದೆ ಎಂದು ಸಾರಾಸಗಟಾಗಿ ಹೇಳುವ ಮೂರ್ಖತನವನ್ನು ನಾನು ತೋರಲಾರೆ. ಆದರೆ ನಿಜವಾದ ಯೋಗಿಗಳ, ಸಂನ್ಯಾಸಿಗಳ ಮಧ್ಯೆ ಇಂತಹ ದರಿದ್ರಗಳು ಸೇರಿಕೊಂಡಾಗ, ಎಲ್ಲಾ ಬಣ್ಣ ಮಸಿ ನುಂಗಿದಂತಾಗುವುದು ಸುಳ್ಳಲ್ಲ.
ನಿಮಗೆ ಆ ತೊಂದರೆ ಇದೆ, ಈ ತೊಂದರೆ ಇದೆ, ನೀವು ನಡೆಯುವುದು ಸರಿ ಇಲ್ಲ, ನಿಮ್ಮ ಹೊಟ್ಟೆಯ ಬೆಳವಣಿಗೆ ಸರಿ ಆಗಿಲ್ಲ, ಹೀಗೆ ಜನರ ಬಾಹ್ಯ ಸೌಂದರ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಹೇಳುವ ಮೂಲಕ, ನಿಜವಾಗಿ ಇಲ್ಲದಿದ್ದರೂ, ಇದೆ ಎಂದು ಬಹಳ ಜ್ಞಾನಿಯಂತೆ ಖಚಿತವಾಗಿ ಹೇಳುವ ಮೂಲಕ, ಜನರಲ್ಲಿ ’ತಾನು ಸರಿ ಇಲ್ಲ’ ಎಂಬ ಭಾವ ಮೂಡುವಂತೆ ಮಾಡಿ, ಅದಕ್ಕೆ ತಾನು ಪರಿಹಾರ ನೀಡುತ್ತೇನೆ ಅಂತ ಒಂದಿಷ್ಟು ಶಿಷ್ಯರನ್ನು ಸಂಪಾದಿಸುವ ಹಲವಾರು ಖದೀಮರನ್ನು ನಾವು ಇಂದಿನ ಸಮಾಜದಲ್ಲಿ ಕಾಣಬಹುದು. ಇಂತಹವರ ಶಿಷ್ಯವರ್ಗದಲ್ಲಿ ಡಾಕ್ಟರುಗಳು, ಇಂಜಿನಿಯರುಗಳು, ಅಥವಾ ಉನ್ನತ ವಿದ್ಯಾಭ್ಯಾಸವನ್ನು ಹೊಂದಿದ ವ್ಯಕ್ತಿಗಳೂ ಸೇರಿರುತ್ತಾರೆ. ಎಷ್ಟೋ ಬಾರಿ, ಚೆನ್ನಾಗಿ ವೈದ್ಯಕೀಯ ವಿಜ್ಞಾನವನ್ನು ಅಭ್ಯಸಿಸಿ, ತನ್ನ ದೇಹದ ಪ್ರತಿಯೊಂದು ಭಾಗದ ಕುರಿತು ಆಳವಾಗಿ ತಿಳಿದಿರುವ ಉತ್ತಮ ವೈದ್ಯರೂ ಇಂತಹವರ ಮಾತುಗಳನ್ನು ಕೇಳಿ ಮೌಢ್ಯಕ್ಕೊಳಗಾಗುತ್ತಾರೆ. ಸರಿಯಾಗಿಯೇ ಇರುವ ತಮ್ಮ ದೇಹಾಂಗ ರಚನೆಯ ಬಗ್ಗೆ ಸಂಶಯಿಸುತ್ತಾರೆ. ಮಾತಿನ ಜಾಣ್ಮೆ ಇರುವ ಸೊ ಕಾಲ್ಡ್ ಯೋಗಿಗಳು ಅವರನ್ನು ಚಿಕಿತ್ಸೆಯ ಹೆಸರಲ್ಲಿ ಬೇಕಾದಂತೆ ಬಳಸಿಕೊಳ್ಳುತ್ತಾರೆ (ಹೇಗಾದರೂ ಇರಬಹುದು).
ಪ್ರಾಯಶಃ ಕಲಿಯುವುದರಲ್ಲಿ ಜಾಣರಾಗಿದ್ದೂ, ವಿದ್ಯಾರ್ಥಿ ದೆಸೆಯಲ್ಲಿ ಪರೀಕ್ಷೆಗಾಗಿ ಪಠ್ಯದ ಓದನ್ನು ಬಿಟ್ಟು ಇನ್ನೇನನ್ನೂ ತಿಳಿದುಕೊಳ್ಳದೇ ಡಾಕ್ಟರ್ ಗಳೋ, ಇಂಜಿನಿಯರುಗಳೋ ಅಥವಾ ಇನ್ನೇನಾದರೂ ಆದ ವ್ಯಕ್ತಿಗಳು ಉದ್ಯೋಗಕ್ಕೆ ಸೇರಿದ ಬಳಿಕ ಕೆಲಸಗಳ ಒತ್ತಡದಿಂದ ಹೊರಬರಲಾಗದ ಸ್ಥಿತಿಯನ್ನು ತಲುಪಿದಾಗ, ಅವರಿಗೆ ಮೇಲೆ ಉಲ್ಲೇಖಿಸಿದಂತಹ ಮೋಸಗಾರರ ಮಾತುಗಳು ಹಿತವೆನಿಸುತ್ತವೆ. ಅವರು ಹೇಳಿ ಕೊಡುವ ಬಾಲಿಶ ಆಟಗಳು, ಏನೋ ಒಂದು ಸ್ವಲ್ಪ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳನ್ನು ಪರಿಹಾರವೆಂದು ತಿಳಿಯುತ್ತಾರೆ. ಇವರು ಹೇಳಿಕೊಡುವ ವಿಷಯಗಳೆಲ್ಲವೂ ಸರಿ ಇರುತ್ತದೆ ಅಂತೇನಿಲ್ಲ. ಮತ್ತು ಸರಿ ಇಲ್ಲದಾಗ ಅದರಿಂದ ತೊಂದರೆಯೂ ಇದೆ ಎಂಬುದೂ ತಿಳಿದಿರುವ ವಿಷಯವೇ. ಆದರೂ ಇವು ತಮ್ಮ ಸಮಸ್ಯೆಯಿಂದ ಸ್ವಲ್ಪ ಹೊರಬರಲು ಸಹಕಾರಿಯಾಗುತ್ತದೆಂದು ಅಚಲವಾಗಿ ನಂಬಿರುತ್ತಾರೆ. ಹೀಗೆ ತಮ್ಮ ಪರೀಕ್ಷಕ ದೃಷ್ಟಿಯನ್ನು ಕಳಕೊಂಡು ಆ ವ್ಯಕ್ತಿಯೇ ಲೋಕದಲ್ಲಿ ಸರ್ವ ಶ್ರೇಷ್ಠ ಯೋಗಿ ಎಂದು ನಂಬುತ್ತಾರೆ. ಇದು ಕಪಟಿಯಾದರೂ ಆಚಾರ್ಯ, ಗುರು, ಪಂಡಿತ ಅಂತ ಕರೆಸಿಕೊಳ್ಳುವುದಕ್ಕೆ ಆ ವ್ಯಕ್ತಿಗೆ ಸುಲಭವಾಗುತ್ತದೆ.
ಸಾಧಾರಣವಾಗಿ ಇಂತಹ ದುರ್ಜನರ ಗಾಳಕ್ಕೆ ಸುಲಭವಾಗಿ ಬೀಳುವವರು ಸ್ತ್ರೀಯರು. ಅದರಲ್ಲೂ ವಿವಾಹಿತ ಸ್ತ್ರೀಯರು ತಮ್ಮ ಹೊಸ ಪರಿಸ್ಥಿತಿಯಲ್ಲಿ ಭ್ರಮನಿರಸನಕ್ಕೊಳಗಾದಾಗ ಇಂತಹ ಕಪಟಿಗಳ ಸಂದರ್ಶನವಾದರೆ ಸುಲಭದಲ್ಲಿ ಬಲಿಬೀಳುತ್ತಾರೆ. ಆ ವ್ಯಕ್ತಿಯ ಪೂರ್ವಾಪರಗಳ ಕುರಿತು ವಿವೇಚಿಸದೇ ಆತನ ಶಿಷ್ಯೆಯರಾಗಿ ಬಿಡುತ್ತಾರೆ. ತಮ್ಮನ್ನು ತಾವು ಸರಿಮಾಡಿಕೊಳ್ಳುವ ಹಂಬಲದಿಂದ ಹೆಂಗಳೆಯರು ಗುರುಗಳ ಸೇವೆ ಮಾಡಲಾರಂಭಿಸುತ್ತಾರೆ, ಕಡೆಗೆ ಸೇವಿಸಲ್ಪಡುತ್ತಾರೆ. ಇದು ಈ ಗುರುಗಳೆಂದೆನಿಸಿಕೊಂಡವರಿಗೆ ಒಳ್ಳೆಯದೇ. ಅವರ ಪೂರ್ವಾಪರಗಳನ್ನು ಕುರಿತು ಪ್ರಶ್ನಿಸದಿರುವುದರಿಂದ ಕಪಟ ಯೋಗಿಗಳ "ನಿತ್ಯ ಸತ್ಯಗಳು" ಬಹಿರಂಗವಾಗುವುದೇ ಇಲ್ಲ. ಆದರೆ ಯಾವುದಾದರೂ ಟಿ.ವಿ. ಚಾನೆಲ್ಲೋ ಅಥವಾ ಪತ್ರಿಕೆಯವರೋ ಇಂತಹ ಗುರುವಿನ ನೈಜ ಜೀವನವನದ ಚಿತ್ರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಾಗ ಪಶ್ಚಾತ್ತಾಪ ಪಡುತ್ತಾರೆ. ಹಾಗಾಗಿ ಮತ್ತೆ ನೊಂದುಕೊಳ್ಳುವುದರ ಬದಲಾಗಿ ಮೊದಲೇ ವಿವೇಚನೆಯಿಂದ, ಯೋಗಿಗಳೆಂದು ಕರೆಸಿಕೊಳ್ಳುವವರ ಮಾತಿನ ಮೋಡಿಗೆ ಮಾರು ಹೋಗದೇ, ಅವರ ಬದುಕಿನ ಸತ್ಯವನ್ನು ಅರಿತೇ ಮುಂದುವರಿಯುವುದು ಒಳಿತಲ್ಲವೇ?
ಅಕ್ಷರ ದಾಮ್ಲೆ
Wednesday, May 5, 2010
ನಾವು ಯಾರಿಗೂ ಕಾಯಬೇಕಾಗಿಲ್ಲ! ನಾವೇ ಕೈ ಜೋಡಿಸೋಣ
ಈ ಲೇಖನವನ್ನು ಪ್ರಕಟಣೆಗಾಗಿ ವಿಜಯ ಕರ್ನಾಟಕ ಪತ್ರಿಕೆಗೆ ಕಳಿಸಿದ್ದೆ. ಆದರೆ ಪ್ರಕಟವಾಗಲಿಲ್ಲ. ಹಾಗಾಗಿ ಈಗ ನನ್ನದೇ ಪ್ರಕಟಣಾ ಮಾಧ್ಯಮವಾದ ಈ ನನ್ನ ಬ್ಲಾಗ್ ನಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಅನಿಕೆಯನ್ನು ಕಮೆಂಟ್ ಆಗಿ ಬರೆಯಿರಿ.
ಏಪ್ರಿಲ್ ೨೦ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ರಾಜಶೇಖರ ಗೌಡರ ’ರಾಕೆಟ್ ಮತ್ತೆ ಮೇಲೇರುತ್ತದೆ, ಆದರೆ ನಮ್ಮ ಸ್ವಾಭಿಮಾನ ಮೇಲೇರುವುದು ಯಾವಾಗ?’ ಎಂಬ ಲೇಖನವು ಈ ಬರೆಹಕ್ಕೆ ಇಂಬು ಕೊಟ್ಟಿದೆ. ಹಿರಿಯರು ಹೇಳಿದಂತೆ, ’ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿಗೆ ಅನ್ವರ್ಥವಾಗುವಂತೆ, ನಮಗೆ ನಮ್ಮ ವಿಜ್ಞಾನಿಗಳು ಮಾಡಿದ ಸಾಧನೆಗಳ ಬಗ್ಗೆ ಅಸಡ್ಡೆ ಇರುವುದು ದಿಟವೇ. ಬಹುಷಃ ಇದಕ್ಕೆ ಕಾಅಣ ನಮ್ಮ ತುಲನಾತ್ಮಕ ಮನೋಭಾವ. ಉದಾ: ಭಾರತದಲ್ಲಿ ೩ಜಿ ಗೆ ಬಿಡ್ ಮಾಡುವಾಗ ದೂರದ ಜರ್ಮನಿಯಲ್ಲಿ ೪ಜಿ ಗೆ ಬಿಡ್ ನಡೆಯುತ್ತಿದೆ. ಇದರರ್ಥ ನಮಗಿಂತ ತಂತ್ರಜ್ಞಾನದಲ್ಲಿ ಜರ್ಮನಿ ಮುಂದಿದೆ. ಹಾಗೆಯೇ ಚೀನಾ, ಜಪಾನ್, ಫ್ರಾನ್ಸ್, ಅಮೆರಿಕಾ, ರಷ್ಯಾ ಮುಂತಾದ ದೇಶಗಳೂ ಬಹಳ ಮುಂದೆ ಹೋಗಿವೆ. ರಾಜಶೇಖರರವರೇ ಉಲ್ಲೇಖಿಸಿರುವಂತೆ ಅಲ್ಲದೇ ಹಲವಾರು ಪತ್ರಿಕೆಗಳಲ್ಲಿಯೂ ಪ್ರಕಟವಾಗಿರುವಂತೆ, ೧೯೯೨ರಲ್ಲಿಯೇ ರಷ್ಯಾ ಹಾಗೂ ಅಮೇರಿಕಾಗಳಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಇತ್ತು. ಮೊದಲಿಗೆ ನಾವು ತೊಡಗಿದ್ದು ಆ ತಂತ್ರಜ್ಞಾನವನ್ನು ಕೊಳ್ಳಲು. ಇದು ನಮ್ಮ ಕೊಳ್ಳುಬಾಕ ಸಂಸ್ಕೃತಿಗೆ ದೊಡ್ಡ ಉದಾಹರಣೆ. ಬಹುಷಃ ಅಮೆರಿಕಾ ಈ ಕೊಂಡುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಅಡ್ಡಗಾಲಿಡುವುದಲ್ಲವಾಗಿದ್ದರೆ ನಾವು ಇನ್ನೂ ರಷ್ಯಾದ ತಂತ್ರಜ್ಞಾನವನ್ನು ಬಳಸಿಕೊಂಡು ಅಥವಾ ಅದನ್ನೇ ಸ್ವಲ್ಪ ಅಭಿವೃದ್ಧಿಪಡಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉಪಗ್ರಹಗಳನ್ನು ನಭಕ್ಕೇರಿಸುತ್ತಿದ್ದೆವೋ ಏನೋ! ಆದರೆ ಈಗ ಇಸ್ರೋದ ವಿಜ್ಞಾನಿಗಳೇ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಈ ಬಾರಿ ವಿಫಲವಾಗಿರಬಹುದು. ಸೋಲೇ ಗೆಲುವಿನ ಸೋಪಾನವಲ್ಲವೇ? ಹಾಗಾಗಿ ಸೋಲನ್ನು ಸ್ವೀಕರಿಸಿ, ಜೋಪಾನವಾಗಿ ನಾವು ಮುನ್ನಡೆಯಬೇಕು. ಯಶಸ್ಸಿಗಾಗಿ ಸೆಣಸಾಡಬೇಕು.
ಆದರೆ ನನ್ನನ್ನು ಮತ್ತೆ ಮತ್ತೆ ಕಾಡುವ ಪ್ರಶ್ನೆ, ವಿದೇಶಗಳಲ್ಲಿ ಯಶಸ್ವಿಯಾಗಿದ್ದ ಒಂದು ತಂತ್ರಜ್ಞಾನದ ಅಭಿವೃದ್ಧಿಗೆ ನಾವು ೧೫ ವರ್ಷ ಬೆವರು ಸುರಿಸಬೇಕಾಯ್ತಲ್ಲ?! ಇದಕ್ಕೆ ಕಾರಣವೇನಿರಬಹುದು? ಪ್ರಾಯಶಃ ಐಟಿ ಯುಗದ ಆರಂಭದ ತರುವಾಯ ಕಡೆಗಣಿತವಾಗಿರುವ ಮೂಲವಿಜ್ಞಾನಗಳ ಅಧ್ಯಯನ. ಸಂಶೋಧನೆಗೆ ಮೂಲವಿಜ್ಞಾನದ ಅಧ್ಯಯನವು ಬಹಳ ಪ್ರಧಾನವಾದುದು. ಆದರೆ ಇಂದಿನ ಯುವಜನತೆ ಐಟಿ ಎಂಬ ಕುದುರೆಯ ಬೆನ್ನೇರಿ, ಹಣ ಗಳಿಕೆಯ ಓಟದಲ್ಲಿದ್ದಾರೆ. ಹಣವನ್ನು ಯಾರೂ ಗಳಿಸಬಹುದು. ಕೆಟ್ಟ ದಾರಿಗಳ ವಿಚಾರ ಬಿಡೋಣ. ಕನಿಷ್ಠ ವಿದ್ಯಾಭ್ಯಾಸವನ್ನು ಹೊಂದಿ, ನ್ಯಾಯಯುತವಾಗಿಯೇ ಹಣಗಳಿಸಿ ಕೋಟ್ಯಧಿಪತಿಗಳಾಗಿರುವ ಅನೇಕರ ಉದಾಹರಣೆಗಳು ಇಂದು ನಮ್ಮ ಮುಂದಿವೆ. ಆದರೆ ವೈಜ್ಞಾನಿಕ ಸಂಶೋಧನೆಯೆಂಬುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದು ಕೋಟ್ಯಧಿಪತಿಯಾಗುವುದಕ್ಕಿಂತಲೂ ಮಿಗಿಲಾದುದು. ಕೋಟ್ಯಧಿಪತಿಯ ಹಣ ಮಕ್ಕಳು, ಮರಿಗಳು ತಿಂದು ಮುಗಿಸುತ್ತಾರೆ. ಆದರೆ ವಿಜ್ಞಾನಿಯ ಸಾಧನೆಯ ಫಲ ಇಡೀ ಸಮಾಜಕ್ಕೆ ಸಿಗುತ್ತದೆ.
ಶ್ರೀಯುತ ರಾಜಶೇಖರರವರು "ಜನರು ವೈಜ್ಞಾನಿಕ ಸಂಶೋಧನೆಗಳ ಕುರಿತು ಭಾವುಕರಾಗಬೇಕು. ಎಷ್ಟೇ ವಿಫಲವಾದರೂ ಇಸ್ರೋದಲ್ಲಿ ನಂಬಿಕೆ ಇಟ್ಟು ಶುಭ ಹಾರೈಸಬೇಕು. ಆಗ ದೇಶದ ಅಭಿವೃದ್ಧಿಗೆ ದುಡಿಯುವ ಇಸ್ರೋದಂತಹ ನೂರಾರು ಸಂಸ್ಥೆಗಳು ಹುಟ್ಟುತ್ತವೆ. ಅಂಥ ಕಾಲ ಯಾವಾಗ ಬರುತ್ತದೋ ಕಾದು ನೋಡಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿಟವೇ. ಇಂಥ ಆಶಾಭಾವ ನಮ್ಮಲ್ಲಿರಬೇಕು. ಆದರೆ ಯಾರೋ ಮಾಡಲಿ ಅಂತ ಹಾರೈಸುತ್ತಾ ಕಾಯುವುದು ಯಾಕೆ? ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಕುರಿತು ಈಗಲೇ ಪ್ರೇರಣೆ ನೀಡಬೇಕು.
ವಿದೇಶಿ ಕಂಪೆನಿಗಳ ಆಳುಗಳಾಗಿ, ವಿದೇಶಿಯರಿಂದ ಆಳಿಸಿಕೊಳ್ಳುತ್ತಾ, ಹಗಲೂ-ರಾತ್ರಿ ಆ ಕಂಪೆನಿಗಳ ಅಭಿವೃದ್ಧಿಗೆ ದುಡಿಯುತ್ತಿರುವ ಲಕ್ಷ ಲಕ್ಷ ಸಾಫ್ಟ್ ವೇರ್, ಹಾರ್ಡ್ ವೇರ್ ಎಂಜಿನಿರುಗಳಿದ್ದೀರಲ್ಲಾ? ಇಸ್ರೋದಂತಹ ಸಂಸ್ಥೆಗಾಗಿಯೋ, ಅಥವಾ ದೇಶದ ರಕ್ಷಣಾ ವಿಭಾಗದಲ್ಲಿಯೋ, ಅಥವಾ ಆಡಳಿತ ಸೇವೆಯಲ್ಲಿಯೋ, ಯಾಕೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಾರದು? ಇದು ಇಂಜಿನಿಯರುಗಳಿಗಷ್ಟೇ ಸೀಮಿತವಾಗಬೇಕಾಗಿಲ್ಲ. ವೈದ್ಯರುಗಳಿಗೂ ಅಥವಾ ವಿದೇಶಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಯಾವುದೇ ವೃತ್ತಿಯವರಿಗೂ ಅನ್ವಯವಾಗಬಹುದು. ಉತ್ತಮ ವೈದ್ಯರುಗಳು ಸರಕಾರಿ ಆಸ್ಪತ್ರೆಗಳಲ್ಲಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಸರಕಾರದ ಯೋಜನೆಗಳನ್ನು ಅರ್ಥಪೂರ್ಣವಾಗಿಸಬಹುದು. ಇದಕ್ಕೆ ಬೇಕಾಗಿರುವುದು ನಮ್ಮೆಲ್ಲರ ಮನಃಶಕ್ತಿ. ಇಂದು ತಿಂಗಳಿಗೆ ೫೦ ಸಾವಿರ ಸಂಬಳ ಪಡೆಯುತ್ತಿರುವ ವ್ಯಕ್ತಿ ನಾಳೆ ಹದಿನೈದು, ಇಪ್ಪತ್ತು ಸಾವಿರ ಸಂಬಳಕ್ಕೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕಾಗಬಹುದು. ಇಂದು ಕಾರಿನಲ್ಲಿ ಓಡಾಡಿಕೊಂಡಿರುವವನು ನಾಳೆ ಬೈಕ್ ನಲ್ಲಿ ಹೋಗಬೇಕಾಗಬಹುದು. ಬೈಕಿಗೇ ಸೀಮಿತವಾಗಿರುವವನು ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣಿಸಬೇಕಾಗಬಹುದು. ಅಷ್ಟೇ ತಾನೇ?! ದೇಶಕ್ಕಾಗಿ ನಾವು ಇಷ್ಟೂ ತ್ಯಾಗ ಮಾಡಲು ಸಿದ್ಧರಿಲ್ಲವೇ?! ಇದರಿಂದ ಬೆಂಗಳೂರಿನಂತಹ ನಗರಗಳಲ್ಲಿ ಕಂಡುಬರುವ ಗಂಟೆಗಟ್ಟಲೆ ಕಾಯಿಸುವ ಟ್ರಾಫಿಕ್ ಜಾಮ್ ಗಳೂ ಕಡಮೆಯಾಗಬಹುದು. ಪರಿಸರದ ಮೇಲೆ ನಾವು ಮಾಡುತ್ತಿರುವ ಹಾನಿಯ ಪ್ರಮಾಣ ಬಹುವಾಗಿ ಕಡಮೆಯಾಗುತ್ತದೆ. ನಾವು ಹಣದ ಲಾಲಸೆಯಿಂದ, ದುಂದುವೆಚ್ಚದ ಸೋಗಿನಿಂದ ಹೊರಬರುವುದಕ್ಕೆ ಸಿದ್ಧರಾಗಬೇಕು ಅಷ್ಟೆ. ಆಗ ಇಸ್ರೋದಂತಹ ನೂರಾರು ಸಂಸ್ಥೆಗಳು ಭಾರತದ ಅಭಿವೃದ್ಧಿಗೆ ದುಡಿಯುವ ಕನಸು ನನಸಾಗುವುದಕ್ಕೆ ಬಹಳ ವರ್ಷ ಕಾಯಬೇಕಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವರ್ತರಾಗೋಣ.
ಏಪ್ರಿಲ್ ೨೦ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ರಾಜಶೇಖರ ಗೌಡರ ’ರಾಕೆಟ್ ಮತ್ತೆ ಮೇಲೇರುತ್ತದೆ, ಆದರೆ ನಮ್ಮ ಸ್ವಾಭಿಮಾನ ಮೇಲೇರುವುದು ಯಾವಾಗ?’ ಎಂಬ ಲೇಖನವು ಈ ಬರೆಹಕ್ಕೆ ಇಂಬು ಕೊಟ್ಟಿದೆ. ಹಿರಿಯರು ಹೇಳಿದಂತೆ, ’ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿಗೆ ಅನ್ವರ್ಥವಾಗುವಂತೆ, ನಮಗೆ ನಮ್ಮ ವಿಜ್ಞಾನಿಗಳು ಮಾಡಿದ ಸಾಧನೆಗಳ ಬಗ್ಗೆ ಅಸಡ್ಡೆ ಇರುವುದು ದಿಟವೇ. ಬಹುಷಃ ಇದಕ್ಕೆ ಕಾಅಣ ನಮ್ಮ ತುಲನಾತ್ಮಕ ಮನೋಭಾವ. ಉದಾ: ಭಾರತದಲ್ಲಿ ೩ಜಿ ಗೆ ಬಿಡ್ ಮಾಡುವಾಗ ದೂರದ ಜರ್ಮನಿಯಲ್ಲಿ ೪ಜಿ ಗೆ ಬಿಡ್ ನಡೆಯುತ್ತಿದೆ. ಇದರರ್ಥ ನಮಗಿಂತ ತಂತ್ರಜ್ಞಾನದಲ್ಲಿ ಜರ್ಮನಿ ಮುಂದಿದೆ. ಹಾಗೆಯೇ ಚೀನಾ, ಜಪಾನ್, ಫ್ರಾನ್ಸ್, ಅಮೆರಿಕಾ, ರಷ್ಯಾ ಮುಂತಾದ ದೇಶಗಳೂ ಬಹಳ ಮುಂದೆ ಹೋಗಿವೆ. ರಾಜಶೇಖರರವರೇ ಉಲ್ಲೇಖಿಸಿರುವಂತೆ ಅಲ್ಲದೇ ಹಲವಾರು ಪತ್ರಿಕೆಗಳಲ್ಲಿಯೂ ಪ್ರಕಟವಾಗಿರುವಂತೆ, ೧೯೯೨ರಲ್ಲಿಯೇ ರಷ್ಯಾ ಹಾಗೂ ಅಮೇರಿಕಾಗಳಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಇತ್ತು. ಮೊದಲಿಗೆ ನಾವು ತೊಡಗಿದ್ದು ಆ ತಂತ್ರಜ್ಞಾನವನ್ನು ಕೊಳ್ಳಲು. ಇದು ನಮ್ಮ ಕೊಳ್ಳುಬಾಕ ಸಂಸ್ಕೃತಿಗೆ ದೊಡ್ಡ ಉದಾಹರಣೆ. ಬಹುಷಃ ಅಮೆರಿಕಾ ಈ ಕೊಂಡುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಅಡ್ಡಗಾಲಿಡುವುದಲ್ಲವಾಗಿದ್ದರೆ ನಾವು ಇನ್ನೂ ರಷ್ಯಾದ ತಂತ್ರಜ್ಞಾನವನ್ನು ಬಳಸಿಕೊಂಡು ಅಥವಾ ಅದನ್ನೇ ಸ್ವಲ್ಪ ಅಭಿವೃದ್ಧಿಪಡಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉಪಗ್ರಹಗಳನ್ನು ನಭಕ್ಕೇರಿಸುತ್ತಿದ್ದೆವೋ ಏನೋ! ಆದರೆ ಈಗ ಇಸ್ರೋದ ವಿಜ್ಞಾನಿಗಳೇ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಈ ಬಾರಿ ವಿಫಲವಾಗಿರಬಹುದು. ಸೋಲೇ ಗೆಲುವಿನ ಸೋಪಾನವಲ್ಲವೇ? ಹಾಗಾಗಿ ಸೋಲನ್ನು ಸ್ವೀಕರಿಸಿ, ಜೋಪಾನವಾಗಿ ನಾವು ಮುನ್ನಡೆಯಬೇಕು. ಯಶಸ್ಸಿಗಾಗಿ ಸೆಣಸಾಡಬೇಕು.
ಆದರೆ ನನ್ನನ್ನು ಮತ್ತೆ ಮತ್ತೆ ಕಾಡುವ ಪ್ರಶ್ನೆ, ವಿದೇಶಗಳಲ್ಲಿ ಯಶಸ್ವಿಯಾಗಿದ್ದ ಒಂದು ತಂತ್ರಜ್ಞಾನದ ಅಭಿವೃದ್ಧಿಗೆ ನಾವು ೧೫ ವರ್ಷ ಬೆವರು ಸುರಿಸಬೇಕಾಯ್ತಲ್ಲ?! ಇದಕ್ಕೆ ಕಾರಣವೇನಿರಬಹುದು? ಪ್ರಾಯಶಃ ಐಟಿ ಯುಗದ ಆರಂಭದ ತರುವಾಯ ಕಡೆಗಣಿತವಾಗಿರುವ ಮೂಲವಿಜ್ಞಾನಗಳ ಅಧ್ಯಯನ. ಸಂಶೋಧನೆಗೆ ಮೂಲವಿಜ್ಞಾನದ ಅಧ್ಯಯನವು ಬಹಳ ಪ್ರಧಾನವಾದುದು. ಆದರೆ ಇಂದಿನ ಯುವಜನತೆ ಐಟಿ ಎಂಬ ಕುದುರೆಯ ಬೆನ್ನೇರಿ, ಹಣ ಗಳಿಕೆಯ ಓಟದಲ್ಲಿದ್ದಾರೆ. ಹಣವನ್ನು ಯಾರೂ ಗಳಿಸಬಹುದು. ಕೆಟ್ಟ ದಾರಿಗಳ ವಿಚಾರ ಬಿಡೋಣ. ಕನಿಷ್ಠ ವಿದ್ಯಾಭ್ಯಾಸವನ್ನು ಹೊಂದಿ, ನ್ಯಾಯಯುತವಾಗಿಯೇ ಹಣಗಳಿಸಿ ಕೋಟ್ಯಧಿಪತಿಗಳಾಗಿರುವ ಅನೇಕರ ಉದಾಹರಣೆಗಳು ಇಂದು ನಮ್ಮ ಮುಂದಿವೆ. ಆದರೆ ವೈಜ್ಞಾನಿಕ ಸಂಶೋಧನೆಯೆಂಬುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದು ಕೋಟ್ಯಧಿಪತಿಯಾಗುವುದಕ್ಕಿಂತಲೂ ಮಿಗಿಲಾದುದು. ಕೋಟ್ಯಧಿಪತಿಯ ಹಣ ಮಕ್ಕಳು, ಮರಿಗಳು ತಿಂದು ಮುಗಿಸುತ್ತಾರೆ. ಆದರೆ ವಿಜ್ಞಾನಿಯ ಸಾಧನೆಯ ಫಲ ಇಡೀ ಸಮಾಜಕ್ಕೆ ಸಿಗುತ್ತದೆ.
ಶ್ರೀಯುತ ರಾಜಶೇಖರರವರು "ಜನರು ವೈಜ್ಞಾನಿಕ ಸಂಶೋಧನೆಗಳ ಕುರಿತು ಭಾವುಕರಾಗಬೇಕು. ಎಷ್ಟೇ ವಿಫಲವಾದರೂ ಇಸ್ರೋದಲ್ಲಿ ನಂಬಿಕೆ ಇಟ್ಟು ಶುಭ ಹಾರೈಸಬೇಕು. ಆಗ ದೇಶದ ಅಭಿವೃದ್ಧಿಗೆ ದುಡಿಯುವ ಇಸ್ರೋದಂತಹ ನೂರಾರು ಸಂಸ್ಥೆಗಳು ಹುಟ್ಟುತ್ತವೆ. ಅಂಥ ಕಾಲ ಯಾವಾಗ ಬರುತ್ತದೋ ಕಾದು ನೋಡಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿಟವೇ. ಇಂಥ ಆಶಾಭಾವ ನಮ್ಮಲ್ಲಿರಬೇಕು. ಆದರೆ ಯಾರೋ ಮಾಡಲಿ ಅಂತ ಹಾರೈಸುತ್ತಾ ಕಾಯುವುದು ಯಾಕೆ? ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಕುರಿತು ಈಗಲೇ ಪ್ರೇರಣೆ ನೀಡಬೇಕು.
ವಿದೇಶಿ ಕಂಪೆನಿಗಳ ಆಳುಗಳಾಗಿ, ವಿದೇಶಿಯರಿಂದ ಆಳಿಸಿಕೊಳ್ಳುತ್ತಾ, ಹಗಲೂ-ರಾತ್ರಿ ಆ ಕಂಪೆನಿಗಳ ಅಭಿವೃದ್ಧಿಗೆ ದುಡಿಯುತ್ತಿರುವ ಲಕ್ಷ ಲಕ್ಷ ಸಾಫ್ಟ್ ವೇರ್, ಹಾರ್ಡ್ ವೇರ್ ಎಂಜಿನಿರುಗಳಿದ್ದೀರಲ್ಲಾ? ಇಸ್ರೋದಂತಹ ಸಂಸ್ಥೆಗಾಗಿಯೋ, ಅಥವಾ ದೇಶದ ರಕ್ಷಣಾ ವಿಭಾಗದಲ್ಲಿಯೋ, ಅಥವಾ ಆಡಳಿತ ಸೇವೆಯಲ್ಲಿಯೋ, ಯಾಕೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಾರದು? ಇದು ಇಂಜಿನಿಯರುಗಳಿಗಷ್ಟೇ ಸೀಮಿತವಾಗಬೇಕಾಗಿಲ್ಲ. ವೈದ್ಯರುಗಳಿಗೂ ಅಥವಾ ವಿದೇಶಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಯಾವುದೇ ವೃತ್ತಿಯವರಿಗೂ ಅನ್ವಯವಾಗಬಹುದು. ಉತ್ತಮ ವೈದ್ಯರುಗಳು ಸರಕಾರಿ ಆಸ್ಪತ್ರೆಗಳಲ್ಲಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಸರಕಾರದ ಯೋಜನೆಗಳನ್ನು ಅರ್ಥಪೂರ್ಣವಾಗಿಸಬಹುದು. ಇದಕ್ಕೆ ಬೇಕಾಗಿರುವುದು ನಮ್ಮೆಲ್ಲರ ಮನಃಶಕ್ತಿ. ಇಂದು ತಿಂಗಳಿಗೆ ೫೦ ಸಾವಿರ ಸಂಬಳ ಪಡೆಯುತ್ತಿರುವ ವ್ಯಕ್ತಿ ನಾಳೆ ಹದಿನೈದು, ಇಪ್ಪತ್ತು ಸಾವಿರ ಸಂಬಳಕ್ಕೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕಾಗಬಹುದು. ಇಂದು ಕಾರಿನಲ್ಲಿ ಓಡಾಡಿಕೊಂಡಿರುವವನು ನಾಳೆ ಬೈಕ್ ನಲ್ಲಿ ಹೋಗಬೇಕಾಗಬಹುದು. ಬೈಕಿಗೇ ಸೀಮಿತವಾಗಿರುವವನು ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣಿಸಬೇಕಾಗಬಹುದು. ಅಷ್ಟೇ ತಾನೇ?! ದೇಶಕ್ಕಾಗಿ ನಾವು ಇಷ್ಟೂ ತ್ಯಾಗ ಮಾಡಲು ಸಿದ್ಧರಿಲ್ಲವೇ?! ಇದರಿಂದ ಬೆಂಗಳೂರಿನಂತಹ ನಗರಗಳಲ್ಲಿ ಕಂಡುಬರುವ ಗಂಟೆಗಟ್ಟಲೆ ಕಾಯಿಸುವ ಟ್ರಾಫಿಕ್ ಜಾಮ್ ಗಳೂ ಕಡಮೆಯಾಗಬಹುದು. ಪರಿಸರದ ಮೇಲೆ ನಾವು ಮಾಡುತ್ತಿರುವ ಹಾನಿಯ ಪ್ರಮಾಣ ಬಹುವಾಗಿ ಕಡಮೆಯಾಗುತ್ತದೆ. ನಾವು ಹಣದ ಲಾಲಸೆಯಿಂದ, ದುಂದುವೆಚ್ಚದ ಸೋಗಿನಿಂದ ಹೊರಬರುವುದಕ್ಕೆ ಸಿದ್ಧರಾಗಬೇಕು ಅಷ್ಟೆ. ಆಗ ಇಸ್ರೋದಂತಹ ನೂರಾರು ಸಂಸ್ಥೆಗಳು ಭಾರತದ ಅಭಿವೃದ್ಧಿಗೆ ದುಡಿಯುವ ಕನಸು ನನಸಾಗುವುದಕ್ಕೆ ಬಹಳ ವರ್ಷ ಕಾಯಬೇಕಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವರ್ತರಾಗೋಣ.
Monday, March 29, 2010
ತಪ್ಪು ಯಾರದ್ದು?!
ಇತ್ತೀಚಿನ ದಿನಗಳಲ್ಲಿ ಹರೆಯದ ಯುವಕ ಯುವತಿಯರು ಹಾದಿ ತಪ್ಪುತ್ತಿರುವುದಕ್ಕೆ ಈಗಿನ ಮೊಬೈಲ್, ಇಂಟರ್ ನೆಟ್ ಮುಂತಾದ ವ್ಯವಸ್ಥೆಗಳೇ ಕಾರಣ ಎಂದು ಹಲವರು ದೂಷಿಸುವುದನ್ನು ಆಗಾಗ ಪತ್ರಿಕೆಗಳಲ್ಲಿ ಓದುತ್ತೇವೆ, ರೇಡಿಯೋಗಳಲ್ಲಿ ಮತ್ತು ಸಾಮಾನ್ಯವಾಗಿ ಸಭೆ ಸಮಾರಂಭಗಳಲ್ಲಿ ಕೇಳುತ್ತೇವೆ. ನನಗೆ ಅರ್ಥವಾಗದಿರುವುದು, ತಪ್ಪು ಯಾರದ್ದೆಂಬುದು. ತಂತ್ರಜ್ಞಾನದಿಂದ ಹಾದಿ ತಪ್ಪುತ್ತಾರಾದರೆ ತಂತ್ರಜ್ಞಾನವನ್ನೇ ಧಿಕ್ಕರಿಸೋಣವೇ? ಧಿಕ್ಕರಿಸಬೇಕಾದರೆ ಅದರಲ್ಲಿ ಪೂರ್ತಿ ಹಾಳಿರಬೇಕು. ಆದರೆ ಇಂದಿನ ದಿನಗಳಲ್ಲಿ ಮೊಬೈಲ್, ಇಂಟರ್ ನೆಟ್ ಗಳಿಂದಾಗಿ ಸುಲಭ ಸಂಪರ್ಕ ಸಾಧ್ಯವಾಗಿದೆ. ಬಹು ದೊಡ್ದ ಜ್ಞಾನ ಸಂಪತ್ತು ಶೇಖರವಾಗಿದೆ. ಇವುಗಳೆಲ್ಲದರ ಜೊತೆಗೆ ಕೆಟ್ಟ ವಿಷಯಗಳೂ ಇವೆ. ಹೀಗಿರುವಾಗ ತಂತ್ರಜ್ಞಾನದ ಸದುಪಯೋಗದ ಕುರಿತು ಎಳವೆಯಲ್ಲಿಯೇ ಅರಿವನ್ನು ಮೂಡಿಸಿದರೆ, ಆಗ ಹಾದಿ ತಪ್ಪುವುದನ್ನು ತಪ್ಪಿಸಲು ಸಾಧ್ಯ.
ವಿಜ್ಞಾನದ ಯಾವುದೇ ಒಂದು ಸಂಶೋಧನೆಗೆ ಅದರದ್ದೇ ಆದ ಗುಣಾತ್ಮಕ ಹಾಗೂ ಋಣಾತ್ಮಕ ಅಂಶಗಳಿದ್ದೇ ಇರುತ್ತದೆ. ಐನ್ ಸ್ಟೀನ್ ನ ಸಾಪೇಕ್ಷತಾ ವಾದ ಕೂಡಾ ಇದಕ್ಕೆ ಹೊರತಲ್ಲ. ಯಾಕೆಂದರೆ ಸಾಪೇಕ್ಷತಾ ಸಿದ್ಧಾಂತವನ್ನು ಬಳಸಿಕೊಂಡೇ ಅಲ್ಲವೇ ಹಿರೋಶಿಮಾ, ನಾಗಸಾಕಿಯನ್ನು ಧ್ವಂಸಗೊಳಿಸಿದ್ದು?! ಅಥವಾ ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ಜೈವಿಕ ತಂತ್ರಜ್ಞಾನದ ಸಂಶೋಧನೆಗಳೂ ಅಷ್ಟೆ. ಉತ್ತಮ ರೀತಿಯಲ್ಲಿ ಬಳಸಿದರೆ ಅದು ಮಾನವ ಕುಲದ ಒಳಿತಿಗಾಗಿ ಬಳಕೆಯಾಗುತ್ತದೆ. ಇಲ್ಲವಾದರೆ, ನಿರ್ನಾಮಕ್ಕೆ ನಾಂದಿ ಹಾಡುತ್ತದೆ. ಅಂತೆಯೇ ಈ ಮೊಬೈಲ್ ಮತ್ತು ಅಂತರ್ಜಾಲಗಳೆಂಬ ತಂತ್ರಜ್ಞಾನಗಳು.
ಇತ್ತೀಚಿನ ಒಂದು ದಿನ ಪತ್ರಿಕೆಯಲ್ಲಿ ಬಂದ ಲೇಖನದಲ್ಲಿ, ಯುವ ಜನರ ಮೊಬೈಲ್ ಚಾಟಿಂಗ್ ನ್ನು ತಡೆಯಲು ಎಸ್.ಎಂ.ಎಸ್.ಗಳ ದರಗಳನ್ನು ಹೆಚ್ಚಿಸಬೇಕು ಎಂಬ ಉಚಿತ ಸಲಹೆಯನ್ನು ನೀಡಿದ್ದರು. ಆದರೆ ನನ್ನ ದೃಷ್ಟಿಯಲ್ಲಿ ಇದೊಂದು ಹಾಸ್ಯಾಸ್ಪದ ವಿಷಯ. ಯಾಕೆಂದರೆ, ಎಸ್.ಎಂ.ಎಸ್.ಗಳ ಮಹತ್ವ ಅಂತಹುದು. ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಗಳು ಬಳಸುವ ವಿದ್ಯುದಯಸ್ಕಾಂತೀಯ ತರಂಗಗಳಿಂದ ನಮ್ಮ ದೇಹಕ್ಕಾಗುವ ಅನೇಕ ತೊಂದರೆಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳಿಂದ ತಿಳಿದು ಬಂದಿರುವುದೇನೆಂದರೆ, ಕರೆ ಮಾಡಿದಾಗ ದೇಹಕ್ಕಾಗುವ ತೊಂದರೆಗಿಂತ, ಸಂದೇಶಗಳನ್ನು ಕಳಿಸಿದಾಗುವ ಹಾನಿ ಕಡಮೆ ಎಂದು. ಹಾಗಾಗಿ ಮೊಬೈಲುಗಳ ಹಾನಿಗಳ ಕುರಿತು ಮತ್ತು ಅವುಗಳಿಂದ ಆದಷ್ಟೂ ದೂರ ಇರುವುದರ ಕುರಿತು ಹಿರಿಯ ವೈzÀåರುಗಳು ಬರೆದಿರುವ ಲೇಖನಗಳಲ್ಲಿ “ಅಗತ್ಯವಿದ್ದಲ್ಲಿ ಮಾತ್ರ ಕರೆ ಮಾಡಿ. ಮೆಸೇಜ್ ನಲ್ಲೇ ಮುಗಿಸುವಂತಿದ್ದರೆ, ಮೆಸೇಜ್ ಗಳನ್ನೇ ಬಳಸಿ” ಎಂದು ನಾವು ಕಾಣಬಹುದು. ಅಲ್ಲದೇ ಎಷ್ಟೋ ವಿಷಯಗಳನ್ನು ಉದಾಹರಣೆಗೆ ಯಾವುದೋ ಕಾರ್ಯಕ್ರಮದ ಆಮಂತ್ರಣವನ್ನೋ ಅಥವಾ ಯಾರದೋ ವಿಳಾಸವನ್ನೋ ಎಸ್.ಎಂ.ಎಸ್. ಮೂಲಕ ಕಳುಹಿಸುವುದು ಸುಲಭ. ಉಚಿತ ಮೆಸೇಜುಗಳನ್ನು ಒಪರೇಟರ್ ಗಳು ಕೊಡುವುದಕ್ಕೆ ಕಾರಣ, ಮೆಸೇಜುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುವುದು ಅವರಿಗೂ ಬಹಳ ಸುಲಭ ಮತ್ತು ಬಹಳ ಕಡಮೆ ಖರ್ಚಿನದ್ದು. ಉಚಿತ ಮೆಸೇಜುಗಳನ್ನು ಕೊಡುವುದರಿಂದ ಅವರೇನು ಅಂಥ ನಷ್ಟವನ್ನನುಭವಿಸುವುದಿಲ್ಲ. ಇಂಟರ್ ನೆಟ್ ಕೂಡಾ ಈಗ ಅಗ್ಗವಾಗುತ್ತಿದೆ.
ಮಕ್ಕಳು ಮೊಬೈಲಿನಲ್ಲೇ ಮೆಸೇಜ್ ಕಳಿಸಿಕೊಂಡು, ಇಂಟರ್ ನೆಟ್ ನಲ್ಲಿ ಚಾಟ್ ಮಾಡುತ್ತಾ ಸಮಯ ಹಾಳು ಮಾಡುತ್ತಾರೆ ಎಂಬುದು ಹಲವರ ಗೊಣಗಾಟ. ಇದು ಸತ್ಯವೂ ಹೌದು. ಆದರೆ ಇದಕ್ಕೇನು ಕಾರಣ? ಮೊಬೈಲ್ ಓಪರೇಟರ್ ಗಳು ಉಚಿತ ಮೆಸೇಜುಗಳನ್ನು ಕೊಟ್ಟಿರುವುದೇ? ಅಥವಾ ಇಂಟರ್ ನೆಟ್ ಅಗ್ಗವಾಗಿರುವುದೇ? ನನ್ನ ಪ್ರಕಾರ ಎರಡೂ ಅಲ್ಲ. ತನ್ನ ಅಗತ್ಯ, ಅವಶ್ಯಕ್ತೆಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ಬಳಸುವ ವಿವೇಚನೆಯನ್ನು ಕಳೆದುಕೊಂಡಿರುವುದು. ದಿನಕ್ಕೆ ನೂರೋ ನೂರೈವತ್ತೋ ಫ್ರೀ ಮೆಸೇಜ್ ಕೊಟ್ಟಿದ್ದಾರೆಂದ ಮಾತ್ರಕ್ಕೆ ನಾವು ಅಷ್ಟನ್ನೂ ಮುಗಿಸಬೇಕೆಂದು ಯಾರೂ ಹೇಳಿಲ್ಲವಲ್ಲ. ಆದರೂ ಇಂದು ಅನೇಕರು ಫ್ರೀಯಾಗಿ ಸಿಗುವ ಅಷ್ಟೂ ಮೆಸೇಜುಗಳನ್ನು ಕಳಿಸಿ, ತಮ್ಮ ಬೆರಳುಗಳನ್ನು ನೋಯಿಸಿಕೊಂಡೂ ಮುದಗೊಳ್ಳುತ್ತಾರೆ. ಇದು ಒಂಥರಾ ಫ್ರೀ ಸಿಕ್ಕುತ್ತದೆಂದಾದರೆ ತಮಗೆಲ್ಲವೂ ಬೇಕು ಎಂಬ ಲೋಭ. ಈ ಲೋಭವನ್ನು ತೀರಿಸಿಕೊಳ್ಳುವಾಗಲೇ ತಮ್ಮ ಆರೋಗ್ಯವನ್ನೂ ಕೆಡಿಸಿಕೊಳ್ಳುತ್ತೇವೆ ಎಂಬ ಅರಿವಿಲ್ಲದೇ ಹೋಗಿರುವುದು ಖೇದಕರ. ಅಮೆರಿಕಾದಲ್ಲಿ ಯುವ ಜನತೆ ಇದೇ ರೀತಿಯ ಲೋಭಕ್ಕೊಳಗಾಗಿ ಅನೇಕ ವರ್ಷಗಳಿಗೆ ಹಿಂದೆಯೇ ಬೆರಳುಗಳಿಗೆ ಸಂಬಂಧಿಸಿದ ಹಲವಾರು ತೊಂದರೆಗಳನ್ನು ಅನುಭವಿಸಿದ್ದಾರೆ. ಈಗ ಭಾರತದಲ್ಲೂ ಅದೇ ಪರಿಸ್ಥಿತಿ ವ್ಯಾಪಕವಾಗಿ ಹರಡಿದೆ.
ಇಂಟರ್ ನೆಟ್ ಬಳಸುವಾಗಲೂ ಅಷ್ಟೇ. ಅಗ್ಗ ಎಂದು ದಿನವಿಡೀ ಚಾಟ್ ಮಾಡುತ್ತಾ ಕುಳಿತರೆ, ಅದು ಆತನ (ಆಕೆಯ) ಮೂರ್ಖತನವೇ ಹೊರತು ತಂತ್ರಜ್ಞಾನದ್ದಲ್ಲ. ನನಗೆಷ್ಟು ಬೇಕು ಎಂದು ನಿರ್ಧರಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು. ಅದನ್ನು ಮೊದಲು ಬೆಳೆಸಿಕೊಳ್ಳೋಣ. ಆಗ ಈ ಮೇಲಿನ ಗೊಣಗಾಟಗಳಿಗೆ ಆಸ್ಪದವೇ ಇರುವುದಿಲ್ಲ.
ವಿಜ್ಞಾನದ ಯಾವುದೇ ಒಂದು ಸಂಶೋಧನೆಗೆ ಅದರದ್ದೇ ಆದ ಗುಣಾತ್ಮಕ ಹಾಗೂ ಋಣಾತ್ಮಕ ಅಂಶಗಳಿದ್ದೇ ಇರುತ್ತದೆ. ಐನ್ ಸ್ಟೀನ್ ನ ಸಾಪೇಕ್ಷತಾ ವಾದ ಕೂಡಾ ಇದಕ್ಕೆ ಹೊರತಲ್ಲ. ಯಾಕೆಂದರೆ ಸಾಪೇಕ್ಷತಾ ಸಿದ್ಧಾಂತವನ್ನು ಬಳಸಿಕೊಂಡೇ ಅಲ್ಲವೇ ಹಿರೋಶಿಮಾ, ನಾಗಸಾಕಿಯನ್ನು ಧ್ವಂಸಗೊಳಿಸಿದ್ದು?! ಅಥವಾ ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ಜೈವಿಕ ತಂತ್ರಜ್ಞಾನದ ಸಂಶೋಧನೆಗಳೂ ಅಷ್ಟೆ. ಉತ್ತಮ ರೀತಿಯಲ್ಲಿ ಬಳಸಿದರೆ ಅದು ಮಾನವ ಕುಲದ ಒಳಿತಿಗಾಗಿ ಬಳಕೆಯಾಗುತ್ತದೆ. ಇಲ್ಲವಾದರೆ, ನಿರ್ನಾಮಕ್ಕೆ ನಾಂದಿ ಹಾಡುತ್ತದೆ. ಅಂತೆಯೇ ಈ ಮೊಬೈಲ್ ಮತ್ತು ಅಂತರ್ಜಾಲಗಳೆಂಬ ತಂತ್ರಜ್ಞಾನಗಳು.
ಇತ್ತೀಚಿನ ಒಂದು ದಿನ ಪತ್ರಿಕೆಯಲ್ಲಿ ಬಂದ ಲೇಖನದಲ್ಲಿ, ಯುವ ಜನರ ಮೊಬೈಲ್ ಚಾಟಿಂಗ್ ನ್ನು ತಡೆಯಲು ಎಸ್.ಎಂ.ಎಸ್.ಗಳ ದರಗಳನ್ನು ಹೆಚ್ಚಿಸಬೇಕು ಎಂಬ ಉಚಿತ ಸಲಹೆಯನ್ನು ನೀಡಿದ್ದರು. ಆದರೆ ನನ್ನ ದೃಷ್ಟಿಯಲ್ಲಿ ಇದೊಂದು ಹಾಸ್ಯಾಸ್ಪದ ವಿಷಯ. ಯಾಕೆಂದರೆ, ಎಸ್.ಎಂ.ಎಸ್.ಗಳ ಮಹತ್ವ ಅಂತಹುದು. ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಗಳು ಬಳಸುವ ವಿದ್ಯುದಯಸ್ಕಾಂತೀಯ ತರಂಗಗಳಿಂದ ನಮ್ಮ ದೇಹಕ್ಕಾಗುವ ಅನೇಕ ತೊಂದರೆಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳಿಂದ ತಿಳಿದು ಬಂದಿರುವುದೇನೆಂದರೆ, ಕರೆ ಮಾಡಿದಾಗ ದೇಹಕ್ಕಾಗುವ ತೊಂದರೆಗಿಂತ, ಸಂದೇಶಗಳನ್ನು ಕಳಿಸಿದಾಗುವ ಹಾನಿ ಕಡಮೆ ಎಂದು. ಹಾಗಾಗಿ ಮೊಬೈಲುಗಳ ಹಾನಿಗಳ ಕುರಿತು ಮತ್ತು ಅವುಗಳಿಂದ ಆದಷ್ಟೂ ದೂರ ಇರುವುದರ ಕುರಿತು ಹಿರಿಯ ವೈzÀåರುಗಳು ಬರೆದಿರುವ ಲೇಖನಗಳಲ್ಲಿ “ಅಗತ್ಯವಿದ್ದಲ್ಲಿ ಮಾತ್ರ ಕರೆ ಮಾಡಿ. ಮೆಸೇಜ್ ನಲ್ಲೇ ಮುಗಿಸುವಂತಿದ್ದರೆ, ಮೆಸೇಜ್ ಗಳನ್ನೇ ಬಳಸಿ” ಎಂದು ನಾವು ಕಾಣಬಹುದು. ಅಲ್ಲದೇ ಎಷ್ಟೋ ವಿಷಯಗಳನ್ನು ಉದಾಹರಣೆಗೆ ಯಾವುದೋ ಕಾರ್ಯಕ್ರಮದ ಆಮಂತ್ರಣವನ್ನೋ ಅಥವಾ ಯಾರದೋ ವಿಳಾಸವನ್ನೋ ಎಸ್.ಎಂ.ಎಸ್. ಮೂಲಕ ಕಳುಹಿಸುವುದು ಸುಲಭ. ಉಚಿತ ಮೆಸೇಜುಗಳನ್ನು ಒಪರೇಟರ್ ಗಳು ಕೊಡುವುದಕ್ಕೆ ಕಾರಣ, ಮೆಸೇಜುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುವುದು ಅವರಿಗೂ ಬಹಳ ಸುಲಭ ಮತ್ತು ಬಹಳ ಕಡಮೆ ಖರ್ಚಿನದ್ದು. ಉಚಿತ ಮೆಸೇಜುಗಳನ್ನು ಕೊಡುವುದರಿಂದ ಅವರೇನು ಅಂಥ ನಷ್ಟವನ್ನನುಭವಿಸುವುದಿಲ್ಲ. ಇಂಟರ್ ನೆಟ್ ಕೂಡಾ ಈಗ ಅಗ್ಗವಾಗುತ್ತಿದೆ.
ಮಕ್ಕಳು ಮೊಬೈಲಿನಲ್ಲೇ ಮೆಸೇಜ್ ಕಳಿಸಿಕೊಂಡು, ಇಂಟರ್ ನೆಟ್ ನಲ್ಲಿ ಚಾಟ್ ಮಾಡುತ್ತಾ ಸಮಯ ಹಾಳು ಮಾಡುತ್ತಾರೆ ಎಂಬುದು ಹಲವರ ಗೊಣಗಾಟ. ಇದು ಸತ್ಯವೂ ಹೌದು. ಆದರೆ ಇದಕ್ಕೇನು ಕಾರಣ? ಮೊಬೈಲ್ ಓಪರೇಟರ್ ಗಳು ಉಚಿತ ಮೆಸೇಜುಗಳನ್ನು ಕೊಟ್ಟಿರುವುದೇ? ಅಥವಾ ಇಂಟರ್ ನೆಟ್ ಅಗ್ಗವಾಗಿರುವುದೇ? ನನ್ನ ಪ್ರಕಾರ ಎರಡೂ ಅಲ್ಲ. ತನ್ನ ಅಗತ್ಯ, ಅವಶ್ಯಕ್ತೆಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ಬಳಸುವ ವಿವೇಚನೆಯನ್ನು ಕಳೆದುಕೊಂಡಿರುವುದು. ದಿನಕ್ಕೆ ನೂರೋ ನೂರೈವತ್ತೋ ಫ್ರೀ ಮೆಸೇಜ್ ಕೊಟ್ಟಿದ್ದಾರೆಂದ ಮಾತ್ರಕ್ಕೆ ನಾವು ಅಷ್ಟನ್ನೂ ಮುಗಿಸಬೇಕೆಂದು ಯಾರೂ ಹೇಳಿಲ್ಲವಲ್ಲ. ಆದರೂ ಇಂದು ಅನೇಕರು ಫ್ರೀಯಾಗಿ ಸಿಗುವ ಅಷ್ಟೂ ಮೆಸೇಜುಗಳನ್ನು ಕಳಿಸಿ, ತಮ್ಮ ಬೆರಳುಗಳನ್ನು ನೋಯಿಸಿಕೊಂಡೂ ಮುದಗೊಳ್ಳುತ್ತಾರೆ. ಇದು ಒಂಥರಾ ಫ್ರೀ ಸಿಕ್ಕುತ್ತದೆಂದಾದರೆ ತಮಗೆಲ್ಲವೂ ಬೇಕು ಎಂಬ ಲೋಭ. ಈ ಲೋಭವನ್ನು ತೀರಿಸಿಕೊಳ್ಳುವಾಗಲೇ ತಮ್ಮ ಆರೋಗ್ಯವನ್ನೂ ಕೆಡಿಸಿಕೊಳ್ಳುತ್ತೇವೆ ಎಂಬ ಅರಿವಿಲ್ಲದೇ ಹೋಗಿರುವುದು ಖೇದಕರ. ಅಮೆರಿಕಾದಲ್ಲಿ ಯುವ ಜನತೆ ಇದೇ ರೀತಿಯ ಲೋಭಕ್ಕೊಳಗಾಗಿ ಅನೇಕ ವರ್ಷಗಳಿಗೆ ಹಿಂದೆಯೇ ಬೆರಳುಗಳಿಗೆ ಸಂಬಂಧಿಸಿದ ಹಲವಾರು ತೊಂದರೆಗಳನ್ನು ಅನುಭವಿಸಿದ್ದಾರೆ. ಈಗ ಭಾರತದಲ್ಲೂ ಅದೇ ಪರಿಸ್ಥಿತಿ ವ್ಯಾಪಕವಾಗಿ ಹರಡಿದೆ.
ಇಂಟರ್ ನೆಟ್ ಬಳಸುವಾಗಲೂ ಅಷ್ಟೇ. ಅಗ್ಗ ಎಂದು ದಿನವಿಡೀ ಚಾಟ್ ಮಾಡುತ್ತಾ ಕುಳಿತರೆ, ಅದು ಆತನ (ಆಕೆಯ) ಮೂರ್ಖತನವೇ ಹೊರತು ತಂತ್ರಜ್ಞಾನದ್ದಲ್ಲ. ನನಗೆಷ್ಟು ಬೇಕು ಎಂದು ನಿರ್ಧರಿಸುವ ಸಾಮರ್ಥ್ಯ ನಮ್ಮಲ್ಲಿರಬೇಕು. ಅದನ್ನು ಮೊದಲು ಬೆಳೆಸಿಕೊಳ್ಳೋಣ. ಆಗ ಈ ಮೇಲಿನ ಗೊಣಗಾಟಗಳಿಗೆ ಆಸ್ಪದವೇ ಇರುವುದಿಲ್ಲ.
Friday, January 1, 2010
ರಾಜ ನೈತಿಕತೆ ಇಲ್ಲದವರು ರಾಜ್ಯವನ್ನಾಳುವುದೇಕೆ?
ಇಷ್ಟು ದಿನವೂ ಕುರ್ಚಿಯ ಆಸೆ ತನಗಿಲ್ಲ. ತನಗೆ ರಾಜ್ಯದ ಹಿತವೇ ಮುಖ್ಯ ಎಂದೆಲ್ಲಾ ಬಡಾಯಿ ಕೊಚ್ಚುತ್ತಿದ್ದ ಯಡ್ಯೂರಪ್ಪ ಅವರು ನಿನ್ನೆ ಸಾರ್ವಜನಿಕವಾಗಿ “ಕುರ್ಚಿಯ ಆಸೆಯಿಂದ ಕೆಲವು ತಪ್ಪುಗಳನ್ನು ಮಾಡಬೇಕಾಯಿತು” ಎಂದು ಕ್ಷಮೆ ಕೇಳಿದ್ದನ್ನು ನೋಡಿ ಇಂತಹವರಿಗೆ ರಾಜ್ಯವನ್ನಾಳುವುದಕ್ಕೆ ಅವಕಾಶ ಸಿಕ್ಕಿದ್ದು ದೊಡ್ಡ ಪ್ರಮಾದವಾಯಿತು ಅಂತ ಅನ್ನಿಸುತ್ತದೆ. ಪ್ರಮಾಣ ವಚನ ಸ್ವೀಕರಿಸಿದಾಗಿನಿಂದಲೂ ತಪ್ಪುಗಳ ಸರಮಾಲೆಯನ್ನೇ ಮಾಡಿಕೊಂಡು, ಮತ್ತು ಅದಕ್ಕೆ ಆಗಾಗ ಕ್ಷಮೆಯನ್ನು ಕೇಳಿ ಇನ್ನು ತಪ್ಪುಮಾಡುವುದಿಲ್ಲವೆಂದು ಹೇಳಿಕೊಂಡು, ಇನ್ನೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಂಡಿರಲು ನಾಚಿಕೆಯಾಗುವುದಿಲ್ಲವೇ? ರೈತರಿಗೆ ಗುಂಡು ಹಾರಿಸಿದರು, ಕ್ಷಮೆ ಕೇಳಿದರು, ರೈತರ ಮೇಲೆ ಲಾಠಿ ಚಾರ್ಜ್ ಮಾಡಿದರು, ಕ್ಷಮೆ ಕೇಳಿದರು, ಬಿ.ಜೆ.ಪಿ.ಯಲ್ಲಿ ಭಿನ್ನಮತ ಮುಗಿಲು ಮುಟ್ಟಿದಾಗ ನಾಯಿಗಳಂತೆ ಕಚ್ಚಾಡಿಕೊಂಡರು, ನಂತರ ಕ್ಷಮೆ ಕೇಳಿದರು, ಕಾಮುಕನೆಂದು ಪ್ರಸಿದ್ಧಿ ಪಡೆದ ರೇಣುಕಾಚಾರ್ಯನನ್ನು ಸಚಿವರನ್ನಾಗಿ ಮಾಡಿದರು, ಕ್ಷಮೆ ಕೇಳಿದರು. ಹೀಗೆ ಸಣ್ಣ ಮಕ್ಕಳಾಟದಂತೆ ಒಂದು ರಾಜ್ಯದ ಮುಖ್ಯಮಂತ್ರಿ ನಡೆದುಕೊಳ್ಳುವುದೆಂದರೇನು? ಕರ್ನಾಟಕ ರಾಜ್ಯದ ಆಡಳಿತದ ಹೊಣೆ ಹೊತ್ತ ಮೇಲೆ, ಯಾವುದೇ ಒಂದು ನಿರ್ಧಾರಗಳನ್ನು ಕೈಗೊಳ್ಳುವಾಗಲೂ ಅದರ ಪೂರ್ವಾಪರಗಳನ್ನು ಯೋಚಿಸದೇ, ನಂತರ ಕೆಲಸ ಕೆಟ್ಟ ಮೇಲೆ ಕ್ಷಮೆ ಕೇಳುವುದು ನಮ್ಮ ಮುಖ್ಯಮಂತ್ರಿಗಳಿಗೆ ರೂಢಿಯಾಗಿ ಬಿಟ್ಟಿದೆ. ಹೌದು, ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುವುದು ಒಳ್ಳೆಯ ಗುಣವೇ. ಹಾಗಂತ ಎಷ್ಟು ಬಾರಿ ತಪ್ಪು ಮಾಡುವುದು? ಆಡಳಿತ ಚುಕ್ಕಾಣಿ ಹಿಡಿಯುವ ಮೊದಲೇ ತನ್ನಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವೇ ಎಂಬ ವಿಮರ್ಶೆಯನ್ನೂ ಮಾಡದ್ದಕ್ಕೆ ಶ್ರೀ ಯಡ್ಯೂರಪ್ಪನವರು ಈಗ ದಂಡ ತೆರುತ್ತಿದ್ದಾರೆ. ಅಲ್ಲಲ್ಲ, ಅಂತಹವರಿಗೆ ಅಧಿಕಾರವನ್ನು ಕೊಟ್ಟು ನಾವೆಲ್ಲರೂ ದಂಡ ತೆರುತ್ತಿದ್ದೇವೆ ಅನ್ನುವುದೇ ಸೂಕ್ತ. ಪ್ರತಿಪಕ್ಷಗಳು ಮಾಡಿದ ಆಕ್ಷೇಪಗಳಿಗೆ ಸದನದಲ್ಲಿ ಚಾಲೆಂಜ್ ಮಾಡುವ ಮಾತಾಡುತ್ತಾರೆ, ಆದರೆ ಈ ಕಡೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಾರೆ. ಈ ಡಬಲ್ ಗೇಮ್ ಆಡುವ ಯಡ್ಯೂರಪ್ಪ ಮಾಡಿದ ತಪ್ಪುಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ. ಜನತೆಯ ಬೊಕ್ಕಸದ ವೆಚ್ಚದಲ್ಲಿ ದೇವಸ್ಥಾನಗಳಿಗೆ ಹೋಗುವುದು, ಕಾಣಿಕೆ ಹಾಕುವುದು, ಪೂಜೆ ಮಾಡಿಸುವುದು ಹೀಗೆ ಮಾಡಿಕೊಂಡಿದ್ದರೇ ರಾಜ್ಯ ಸುಭಿಕ್ಷವಾಗುತ್ತದೆ ಅನ್ನುವಂತಿದ್ದರೆ, ಇಷ್ಟೆಲ್ಲಾ ಕಷ್ಟ ಇತ್ತೆ! ರಾಜ್ಯದ ಸರ್ವರೂ ಬೇರಾವ ಕೆಲಸವನ್ನೂ ಮಾಡದೇ, ನಿತ್ಯವೂ ದೇವಸ್ಥಾನಗಳಲ್ಲಿ ಕುಳಿತುಕೊಂಡು ಭಜನೆ ಮಾಡಿಕೊಂಡಿರ ಬಹುದಿತ್ತಲ್ಲವೇ? ಆಗ ಯಡ್ಯೂರಪ್ಪ ಮಾಡಿದ ಪೂಜೆಯಿಂದ ಆಗುವ ರಾಜ್ಯದ ಅಭಿವೃದ್ಧಿಗಿಂತ ಸಾವಿರ ಪಾಲು ಅಭಿವೃದ್ಧಿಯಾಗಬಹುದು. ಮೋದಿ ಸರ್ಕಾರದ ಮಾದರಿ ಅಂತ ಮೊದಲಿನಿಂದಲೂ ಬಾಯಿ ಬಡಕೊಂಡ ಯಡ್ಯೂರಪ್ಪ ಮತ್ತು ಅವರ ಸಂಗಡಿಗರು ಕಾರ್ಯದಲ್ಲಿ ಮೋದಿಯವರ ಕೆಲಸದ ಅಳತೆಗೋಲಿನ ಒಂದಿಂಚೂ ಮುಂದೆ ತಲುಪಿಲ್ಲ. ಬಿ.ಜೆ.ಪಿ.ಯಲ್ಲಿ ಜನಸೇವೆಯಿಂದ ಮತ್ತು ಜನಪರ ಕಾರ್ಯಗಳಿಂದಲೇ ಶಾಸಕರಾಗಿ ಚುನಾಯಿತರಾದವರನ್ನು ಮೂಲೆಗುಂಪು ಮಾಡಿ, ಸಮಾಜ ಘಾತುಕರನ್ನು ಮಂತ್ರಿಗಳನ್ನಾಗಿ ಮಾಡಿದ ಯಡ್ಯೂರಪ್ಪರಿಗೆ ಸೇವೆಗಿಂತ ಅಧಿಕಾರ ಮುಖ್ಯ ಮತ್ತು ಅದಕ್ಕಾಗಿ ಹಣವೇ ಮುಖ್ಯ ಎಂಬುದನ್ನು ಎತ್ತಿ ತೋರಿಸುತ್ತದೆ. ಅಜಾತಶತ್ರು ಶ್ರೀ ವಾಜಪೇಯಿಯವರ ಆಡಳಿತವು ಭಾರತವನ್ನು ಹೇಗೆ ಉನ್ನತವಾದ ಸ್ಥಾನಕ್ಕೇರಿಸಿತೋ, ಹಾಗೆಯೇ ಯಡ್ಯೂರಪ್ಪನವರ ಸರ್ಕಾರ ಕರ್ನಾಟಕವನ್ನು ಅಧಪತನಕ್ಕಿಳಿಸುತ್ತಿದೆ. ಖಂಡಿತವಾಗಿಯೂ ಇಂತಹವರಿಗೆ ರಾಜ್ಯವನ್ನಾಳಲು ಕನ್ನಡದ ಜನತೆ ಅವಕಾಶ ಕೊಡಬಾರದು.
ಇಷ್ಟು ದಿನವೂ ಕುರ್ಚಿಯ ಆಸೆ ತನಗಿಲ್ಲ. ತನಗೆ ರಾಜ್ಯದ ಹಿತವೇ ಮುಖ್ಯ ಎಂದೆಲ್ಲಾ ಬಡಾಯಿ ಕೊಚ್ಚುತ್ತಿದ್ದ ಯಡ್ಯೂರಪ್ಪ ಅವರು ನಿನ್ನೆ ಸಾರ್ವಜನಿಕವಾಗಿ “ಕುರ್ಚಿಯ ಆಸೆಯಿಂದ ಕೆಲವು ತಪ್ಪುಗಳನ್ನು ಮಾಡಬೇಕಾಯಿತು” ಎಂದು ಕ್ಷಮೆ ಕೇಳಿದ್ದನ್ನು ನೋಡಿ ಇಂತಹವರಿಗೆ ರಾಜ್ಯವನ್ನಾಳುವುದಕ್ಕೆ ಅವಕಾಶ ಸಿಕ್ಕಿದ್ದು ದೊಡ್ಡ ಪ್ರಮಾದವಾಯಿತು ಅಂತ ಅನ್ನಿಸುತ್ತದೆ. ಪ್ರಮಾಣ ವಚನ ಸ್ವೀಕರಿಸಿದಾಗಿನಿಂದಲೂ ತಪ್ಪುಗಳ ಸರಮಾಲೆಯನ್ನೇ ಮಾಡಿಕೊಂಡು, ಮತ್ತು ಅದಕ್ಕೆ ಆಗಾಗ ಕ್ಷಮೆಯನ್ನು ಕೇಳಿ ಇನ್ನು ತಪ್ಪುಮಾಡುವುದಿಲ್ಲವೆಂದು ಹೇಳಿಕೊಂಡು, ಇನ್ನೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಂಡಿರಲು ನಾಚಿಕೆಯಾಗುವುದಿಲ್ಲವೇ? ರೈತರಿಗೆ ಗುಂಡು ಹಾರಿಸಿದರು, ಕ್ಷಮೆ ಕೇಳಿದರು, ರೈತರ ಮೇಲೆ ಲಾಠಿ ಚಾರ್ಜ್ ಮಾಡಿದರು, ಕ್ಷಮೆ ಕೇಳಿದರು, ಬಿ.ಜೆ.ಪಿ.ಯಲ್ಲಿ ಭಿನ್ನಮತ ಮುಗಿಲು ಮುಟ್ಟಿದಾಗ ನಾಯಿಗಳಂತೆ ಕಚ್ಚಾಡಿಕೊಂಡರು, ನಂತರ ಕ್ಷಮೆ ಕೇಳಿದರು, ಕಾಮುಕನೆಂದು ಪ್ರಸಿದ್ಧಿ ಪಡೆದ ರೇಣುಕಾಚಾರ್ಯನನ್ನು ಸಚಿವರನ್ನಾಗಿ ಮಾಡಿದರು, ಕ್ಷಮೆ ಕೇಳಿದರು. ಹೀಗೆ ಸಣ್ಣ ಮಕ್ಕಳಾಟದಂತೆ ಒಂದು ರಾಜ್ಯದ ಮುಖ್ಯಮಂತ್ರಿ ನಡೆದುಕೊಳ್ಳುವುದೆಂದರೇನು? ಕರ್ನಾಟಕ ರಾಜ್ಯದ ಆಡಳಿತದ ಹೊಣೆ ಹೊತ್ತ ಮೇಲೆ, ಯಾವುದೇ ಒಂದು ನಿರ್ಧಾರಗಳನ್ನು ಕೈಗೊಳ್ಳುವಾಗಲೂ ಅದರ ಪೂರ್ವಾಪರಗಳನ್ನು ಯೋಚಿಸದೇ, ನಂತರ ಕೆಲಸ ಕೆಟ್ಟ ಮೇಲೆ ಕ್ಷಮೆ ಕೇಳುವುದು ನಮ್ಮ ಮುಖ್ಯಮಂತ್ರಿಗಳಿಗೆ ರೂಢಿಯಾಗಿ ಬಿಟ್ಟಿದೆ. ಹೌದು, ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುವುದು ಒಳ್ಳೆಯ ಗುಣವೇ. ಹಾಗಂತ ಎಷ್ಟು ಬಾರಿ ತಪ್ಪು ಮಾಡುವುದು? ಆಡಳಿತ ಚುಕ್ಕಾಣಿ ಹಿಡಿಯುವ ಮೊದಲೇ ತನ್ನಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವೇ ಎಂಬ ವಿಮರ್ಶೆಯನ್ನೂ ಮಾಡದ್ದಕ್ಕೆ ಶ್ರೀ ಯಡ್ಯೂರಪ್ಪನವರು ಈಗ ದಂಡ ತೆರುತ್ತಿದ್ದಾರೆ. ಅಲ್ಲಲ್ಲ, ಅಂತಹವರಿಗೆ ಅಧಿಕಾರವನ್ನು ಕೊಟ್ಟು ನಾವೆಲ್ಲರೂ ದಂಡ ತೆರುತ್ತಿದ್ದೇವೆ ಅನ್ನುವುದೇ ಸೂಕ್ತ. ಪ್ರತಿಪಕ್ಷಗಳು ಮಾಡಿದ ಆಕ್ಷೇಪಗಳಿಗೆ ಸದನದಲ್ಲಿ ಚಾಲೆಂಜ್ ಮಾಡುವ ಮಾತಾಡುತ್ತಾರೆ, ಆದರೆ ಈ ಕಡೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಾರೆ. ಈ ಡಬಲ್ ಗೇಮ್ ಆಡುವ ಯಡ್ಯೂರಪ್ಪ ಮಾಡಿದ ತಪ್ಪುಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ. ಜನತೆಯ ಬೊಕ್ಕಸದ ವೆಚ್ಚದಲ್ಲಿ ದೇವಸ್ಥಾನಗಳಿಗೆ ಹೋಗುವುದು, ಕಾಣಿಕೆ ಹಾಕುವುದು, ಪೂಜೆ ಮಾಡಿಸುವುದು ಹೀಗೆ ಮಾಡಿಕೊಂಡಿದ್ದರೇ ರಾಜ್ಯ ಸುಭಿಕ್ಷವಾಗುತ್ತದೆ ಅನ್ನುವಂತಿದ್ದರೆ, ಇಷ್ಟೆಲ್ಲಾ ಕಷ್ಟ ಇತ್ತೆ! ರಾಜ್ಯದ ಸರ್ವರೂ ಬೇರಾವ ಕೆಲಸವನ್ನೂ ಮಾಡದೇ, ನಿತ್ಯವೂ ದೇವಸ್ಥಾನಗಳಲ್ಲಿ ಕುಳಿತುಕೊಂಡು ಭಜನೆ ಮಾಡಿಕೊಂಡಿರ ಬಹುದಿತ್ತಲ್ಲವೇ? ಆಗ ಯಡ್ಯೂರಪ್ಪ ಮಾಡಿದ ಪೂಜೆಯಿಂದ ಆಗುವ ರಾಜ್ಯದ ಅಭಿವೃದ್ಧಿಗಿಂತ ಸಾವಿರ ಪಾಲು ಅಭಿವೃದ್ಧಿಯಾಗಬಹುದು. ಮೋದಿ ಸರ್ಕಾರದ ಮಾದರಿ ಅಂತ ಮೊದಲಿನಿಂದಲೂ ಬಾಯಿ ಬಡಕೊಂಡ ಯಡ್ಯೂರಪ್ಪ ಮತ್ತು ಅವರ ಸಂಗಡಿಗರು ಕಾರ್ಯದಲ್ಲಿ ಮೋದಿಯವರ ಕೆಲಸದ ಅಳತೆಗೋಲಿನ ಒಂದಿಂಚೂ ಮುಂದೆ ತಲುಪಿಲ್ಲ. ಬಿ.ಜೆ.ಪಿ.ಯಲ್ಲಿ ಜನಸೇವೆಯಿಂದ ಮತ್ತು ಜನಪರ ಕಾರ್ಯಗಳಿಂದಲೇ ಶಾಸಕರಾಗಿ ಚುನಾಯಿತರಾದವರನ್ನು ಮೂಲೆಗುಂಪು ಮಾಡಿ, ಸಮಾಜ ಘಾತುಕರನ್ನು ಮಂತ್ರಿಗಳನ್ನಾಗಿ ಮಾಡಿದ ಯಡ್ಯೂರಪ್ಪರಿಗೆ ಸೇವೆಗಿಂತ ಅಧಿಕಾರ ಮುಖ್ಯ ಮತ್ತು ಅದಕ್ಕಾಗಿ ಹಣವೇ ಮುಖ್ಯ ಎಂಬುದನ್ನು ಎತ್ತಿ ತೋರಿಸುತ್ತದೆ. ಅಜಾತಶತ್ರು ಶ್ರೀ ವಾಜಪೇಯಿಯವರ ಆಡಳಿತವು ಭಾರತವನ್ನು ಹೇಗೆ ಉನ್ನತವಾದ ಸ್ಥಾನಕ್ಕೇರಿಸಿತೋ, ಹಾಗೆಯೇ ಯಡ್ಯೂರಪ್ಪನವರ ಸರ್ಕಾರ ಕರ್ನಾಟಕವನ್ನು ಅಧಪತನಕ್ಕಿಳಿಸುತ್ತಿದೆ. ಖಂಡಿತವಾಗಿಯೂ ಇಂತಹವರಿಗೆ ರಾಜ್ಯವನ್ನಾಳಲು ಕನ್ನಡದ ಜನತೆ ಅವಕಾಶ ಕೊಡಬಾರದು.
Sunday, December 27, 2009
Blognalli nanna modala baraha
ಹಲವಾರು ಬ್ಲಾಗ್ ಗಳನ್ನೂ ನೋಡಿ ನನಗೂ ನನ್ನದೇ ಆದ ಒಂದು ಬ್ಲಾಗ್ ನಲ್ಲಿ ನನಗನಿಸಿದ್ದನ್ನು ಹಂಚಿಕೊಳ್ಳೋಣ ಅನ್ನುವ ಯೋಚನೆ ಬಂತು... ಇದರಲ್ಲಿ ನನ್ನ ಆಳ್ವಾಸ್ ನ ಅನುಭವಗಳು, ಮತ್ತು ಇತರ ಅನುಭವಗಳನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೆ.. ಬರೆವಣಿಗೆಯ ಕುರಿತು, ಖಂಡಿತ ನಿಮ್ಮ ಅನಿಸಿಕೆಗಳನ್ನು, ತಿದ್ದುಪದಿಗಲಿದ್ದಲ್ಲಿ ಅವುಗಳನ್ನು ತಿಳಿಸಿ. ಮುಕ್ತವಾಗಿ ಸ್ವೀಕರಿಸುತ್ತೇನೆ.
ಇಂತಿ ನಿಮ್ಮವ
ಅಕ್ಷರ
ಇಂತಿ ನಿಮ್ಮವ
ಅಕ್ಷರ
Subscribe to:
Posts (Atom)